Blog

ಮತ್ತಾವು ಗೆ ಸೇತುವೆ, ರಸ್ತೆ ಮಂಜೂರು

ಕಬ್ಬಿನಾಲೆ ಗ್ರಾಮದ ಅರಣ್ಯ ಬುಡಕಟ್ಟು ಪರಿಶಿಷ್ಠ ಪಂಗಡದ ಮಲೆ ಕುಡಿಯ ಕಾಲೋನಿಯನ್ನು ಸಂಪರ್ಕಿಸುವ ಸೇತುವೆ ಹಾಗೂ ರಸ್ತೆ ಅಭಿವೃದ್ದಿ ಕಾಮಗಾರಿಗೆ ರೂ 2 ಕೋಟಿ ಅನುದಾನ ಮಂಜೂರುಗೊಂಡಿದೆ ಎಂದು ಶಾಸಕ ಸುನಿಲ್ ಕುಮಾರ್ ಮಾಧ್ಯಮ ಬಿಂಬಕ್ಕೆ ತಿಳಿಸಿದ್ದಾರೆ.


ಮತ್ತಾವು ಪ್ರದೇಶ ಪ್ರತೀ ಬಾರಿಯ ಮಳೆಗಾಲದ ಸಂದರ್ಭದಲ್ಲಿ ಜನರಿಗೆ ಬಹಳ ಆತಂಕವನ್ನು ತರುತ್ತಿತ್ತು. ಈ ಪರಿಸರದ ಜನರು ಹಲವಾರು ವರ್ಷಗಳಿಂದ ತಮ್ಮ ಬೇಡಿಕೆಯನ್ನು ಜನ ಪ್ರತಿನಿಧಿಗಳಿಗೆ ತಿಳಿಸುತ್ತಾ ಬಂದಿದ್ದರು.

ಈ ಪರಿಸರದಲ್ಲಿ ಹಲವಾರು ಮಲೆ ಕುಡಿಯರ ಮನೆಗಳಿದ್ದು ಅವರೆಲ್ಲರು ಕೂಡಾ ಈ ಸಮಸ್ಯೆಯಿಂದಾಗಿ ತೊಂದರೆ ಅನುಭವಿಸುತ್ತಲೇ ಬಂದಿದ್ದರು. ಮಳೆಗಾಲದಲ್ಲಿ ತುಂಬಿ ಹರಿಯುವ ನದಿಯನ್ನು ಮೇಲಿನ ಕಾಲು ಸಂಕದ ಮೂಲಕ ನಡೆದು ಕೊಂಡು ಹೋಗುವುದು ತೀರಾ ಅಪಾಯಕಾರಿ ಆಗಿತ್ತು. ಹಲವಾರು ವರ್ಷಗಳ ಬೇಡಿಕೆಯ ನಂತರ ಈ ಬಾರಿ ಈ ಸೇತುವೆ ಹಾಗೂ ರಸ್ತೆಗೆ ಅನುದಾನ ಮಂಜೂರುಗೊಂಡು ಜನ ಸಂತಸ ಪಡುವಂತಾಗಿದೆ.

Related posts

ಮೂಡುಬಿದಿರೆ ಲಾಡಿಯಲ್ಲಿ ಫೆ.12 ರಿಂದ 16ರವರೆಗೆ ಬ್ರಹ್ಮಕಲಶೋತ್ಸವ ಸಂಭ್ರಮ

Madhyama Bimba

ರಾಜ್ಯೋತ್ಸವ ಪುರಸ್ಕೃತ ಜನಾರ್ಧನ್ ಗೆ ಸನ್ಮಾನ

Madhyama Bimba

ಇನ್ನಾದಲ್ಲಿ ಪವರ್ ಪ್ರಾಜೆಕ್ಟ್ ವಾರ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More