Blog

ಬಸ್ ಗೆ ಗುದ್ದಿದ ಲಾರಿ

ಕಾರ್ಕಳದಿಂದ ಮೂಡಬಿದ್ರಿ ಗೆ ಹೋಗುತ್ತಿದ್ದ ನಿಶ್ಮಿತಾ ಬಸ್ ಗೆ ಲಾರಿಯೊಂದು ಗುದ್ದಿದ ಘಟನೆ ವರದಿಯಾಗಿದೆ.

ಇಂದು ಬೆಳಿಗ್ಗೆ ಕಾರ್ಕಳದಿಂದ ಮೂಡಬಿದ್ರಿ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ಗೆ ಮೂಡಬಿದ್ರಿ ಕಡೆಯಿಂದ ಬರುತ್ತಿದ್ದ ಲಾರಿ ನೇರವಾಗಿ ಮುಖಾ ಮುಖಿಯಾಗಿದೆ.

ಅಪಘಾತ ಆಗುವ ಮುನ್ಸೂಚನೆ ತಿಳಿದ ಖಾಸಗಿ ಬಸ್ ಚಾಲಕ ತಕ್ಷಣ ಬಸ್ ನ್ನು ಎಡ ಭಾಗಕ್ಕೆ ತಿರುಗಿಸಿದಾಗ ಲಾರಿ ಬಸ್ ನ ಬಲ ಭಾಗಕ್ಕೆ ಉಜ್ಜಿ ಕೊಂಡು ಹೋಗಿ ರಸ್ತೆಯಿಂದ ಮಣ್ಣಿನ ಮಾರ್ಗದತ್ತ ಚಲಿಸಿದೆ.

ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ಅಪಘಾತ ಆಗುವುದು ತಪ್ಪಿದೆ.

ಬಳಿಕ ಖಾಸಗಿ ಬಸ್ನಲ್ಲಿದ್ದ ಪ್ರಯಾಣಿಕರನ್ನು ಬೇರೆ ಬಸ್ ಮೂಲಕ ಕಳುಹಿಸಲಾಯಿತು.

Related posts

ಗೋಪಾಲ್ ಜಿ ನೆಲ್ಲಿಗೆ ಭೇಟಿ

Madhyama Bimba

ಬೇಕಾಗಿದ್ದಾರೆ

Madhyama Bimba

ಕಾರ್ಕಳ ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕೊಡಿ ಮರ ಪ್ರತಿಷ್ಠೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More