ಕಾರ್ಕಳ

ಭುವನೇಂದ್ರ ಕಾಲೇಜಿನಲ್ಲಿ ಹದಿಹರೆಯದ ಸಮಸ್ಯೆಗಳು ಮತ್ತು ಮಾದಕ ದ್ರವ್ಯ ವ್ಯಸನಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮ

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ, ರೋಟ್ರಾಕ್ಟ್ ಕ್ಲಬ್ ಶ್ರೀ ಭುವನೇಂದ್ರ ಕಾಲೇಜು ಮತ್ತು ಎನ್‌ಎನ್‌ಎಸ್ ಘಟಕ, ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ ಇದರ ಸಹಯೋಗದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ” ಅವಾರ್‌ನೆಸ್ ಆನ್ ಸಬ್‌ಸ್ಟ್ಯಾನ್ಸ್ ಅಬ್ಯೂಸ್ ಆಂಡ್ ಅಡೋಲ್‌ಸೆಂಟ್ ಮೆಂಟಲ್ ಹೆಲ್ತ್” ಎಂಬ ಉಪನ್ಯಾಸ ಕಾರ್ಯಕ್ರಮವನ್ನು ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಎವಿ ಸಭಾಂಗಣ ಏ. 16ರಂದು ಆಯೋಜಿಸಲಾಗಿತ್ತು.


ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿ ಎವಿ ಬಾಳಿಗಾ ಮೆಮೋರೀಯಲ್ ಹಾಸ್ಪಿಟಲ್‌ನ ವೈದ್ಯರು, ಎಡಿಕ್ಷನ್ ಪ್ರಿವೆನ್ಶನ್ ರೋಟರಿ ಜಿಲ್ಲಾ ಚೇರ್‌ಮೆನ್ ರೋ.ಡಾ.ವಿರೂಪಾಕ್ಷ ದೇವರುಮನೆ, ಮತ್ತು ಉಡುಪಿ ಎವಿ ಬಾಳಿಗಾ ಮೆಮೊರೀಯಲ್ ಹಾಸ್ಪಿಟಲ್‌ನ ಸೈಕೋ ಸೋಶಿಯಲ್ ಕನ್ಸಲ್ಟೆಂಟ್ ವಿದ್ಯಾಶ್ರೀ ಎನ್. ಎಮ್. ಇವರುಗಳು ಭಾಗವಹಿಸಿ, ಹದಿಹರೆಯದ ಸಮಸ್ಯೆಗಳು ಮತ್ತು ಮಾದಕ ದ್ರವ್ಯ ವ್ಯಸನಗಳಿಂದ ದೂರವಿರುವ ಹಾಗು ಅವುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ವಿವರಿಸಿದರು.


ಮುಖ್ಯ ಅತಿಥಿಗಳಾಗಿ ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಂಜುನಾಥ ಕೋಟ್ಯಾನ್ ಭಾಗವಹಿಸಿ, ಕಾಲೇಜು ವಿದ್ಯಾರ್ಥಿಗಳಿಗೆ ಉಪಯುಕ್ತ/ಅರ್ಥಪೂರ್ಣ ಕಾರ್ಯಕ್ರಮವನ್ನು ಅಯೋಜಿಸಿರುವ ರೋಟರಿ ಕ್ಲಬ್ ಹಾಗು ರೋಟ್ರಾಕ್ಟ್ ಕ್ಲಬ್‌ಗಳ ಕಾರ್ಯವನ್ನು ಶ್ಲಾಘಿಸಿದರು.

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇದರ ಪೂರ್ವಾಧ್ಯಕ್ಷರುಗಳಾದ ಸುರೇಂದ್ರ ನಾಯಕ್ ಮತ್ತು ಚಿರಾಗ್ ರಾವ್, ಸದಸ್ಯರಾದ ರಾಘವೇಂದ್ರ ಕಾಮತ್ ಉಪಸ್ಥಿತರಿದ್ದರು.

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇದರ ಅಧ್ಯಕ್ಷರಾದ ರೋ| ಉಪೇಂದ್ರ ವಾಗ್ಲೆ ಸ್ವಾಗತಿಸಿದರು. ರೋಟ್ರಾಕ್ಟ್ ಕ್ಲಬ್ ಅಧ್ಯಕ್ಷರಾದ ರೋಟ್ರಾಕ್ಟರ್ ಅಕ್ಷಿತಾ ಶೆಟ್ಟಿಗಾರ್ ವಂದಿಸಿದರು. ರೋಟ್ರಾಕ್ಟರ್ ಧನುಶ್ರೀ ಪೈ ಕಾರ್ಯಕ್ರಮವನ್ನು ನಿರೂಪಿಸಿದರು.

ಉಪನ್ಯಾಸಕರಾದ ರೋ| ಶಂಕರ್ ಕುಡ್ವ, ಮತ್ತು ಟೀಚರ್ ಕೋಆರ್ಡಿನೇಟರ್ ರಾಮದಾಸ ಶೆಟ್ಟಿ ಮತ್ತು ಇತರರು ಉಪಸ್ಥಿತರಿದ್ದರು.

 

Related posts

ಕಾರ್ಕಳ ಕರಿಯಕಲ್ಲು ರಸ್ತೆಯ ಗೋಳು ಹೇಳತೀರದು: ಪ್ರಕಾಶ್ ರಾವ್

Madhyama Bimba

ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ ‘ನಮ್ಮ ಸಂವಿಧಾನ -ನಮ್ಮ ಹೆಮ್ಮೆ’ ವಿಶೇಷ ಸಂವಾದ ಕಾರ್ಯಕ್ರಮ ಮತ್ತು ಚಿತ್ರೀಕರಣ

Madhyama Bimba

ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿ ನೀರೆ- ಬ್ರಹ್ಮಕಲಶಾಭಿಷೇಕ ಮತ್ತು ನೇಮೋತ್ಸವ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More