ಕಾರ್ಕಳ: ಕಾರ್ಕಳ ಮುಡಾರು ಗ್ರಾಮದ ಬಜಗೋಳಿ ಪೆಟ್ರೋಲ್ ಬಂಕ್ ಬಳಿ ಹಾದು ಹೋಗಿರುವ ಬಜಗೋಳಿ-ಕಾರ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿಗೆ ಸ್ಕೂಟರ್ ಡಿಕ್ಕಿಯಾದ ಘಟನೆ ಏ. 18ರಂದು ನಡೆದಿದೆ.
ಪ್ರಜ್ವಲ್ ಎಂ.ಎಸ್. ಇವರು ಬಜಗೋಳಿ ಕಡೆಯಿಂದ ಕಾರ್ಕಳ ಕಡೆಗೆ ಕಾರನ್ನು ಚಲಾಯಿಸಿಕೊಂಡು ಬರುತ್ತಿರುವಾಗ ಹೋಂಡಾ ಆಕ್ಟೀವಾ ದ್ವಿಚಕ್ರ ವಾಹನವನ್ನು ಸವಾರೆ ನವ್ಯಾ ಇವರು ಜ್ಯೋತಿ ಇವರನ್ನು ಹಿಂಬದಿಯಲ್ಲಿ ಸಹಸವಾರೆಯನ್ನಾಗಿ ಕುಳ್ಳಿರಿಸಿಕೊಂಡು ರಸ್ತೆಯ ಎಡ ಬದಿಯಲ್ಲಿರುವ ಸರ್ವಿಸ್ ಸ್ಟೇಷನ್ ಕಡೆಯಿಂದ ಮುಖ್ಯ ರಸ್ತೆಗೆ ಸವಾರಿ ಮಾಡಿಕೊಂಡು ಬಂದು ಕಾರಿಗೆ ಢಿಕ್ಕಿ ಹೊಡೆದಿದ್ದಾರೆ.
ಡಿಕ್ಕಿಯ ಪರಿಣಾಮ ದ್ವಿಚಕ್ರ ವಾಹನ ಸವಾರೆ ನವ್ಯ ರವರ ಬಲಕೈಯ ಮೊಣಗಂಟಿಗೆ, ಬಲ ಕಾಲಿಗೆ ಮತ್ತು ಎಡ ಕೈ ಮೊಣಗಂಟಿಗೆ ರಕ್ತಗಾಯ ಮತ್ತು ಸಹಸವಾರೆ ಜ್ಯೋತಿ ಯವರ ತಲೆಗೆ, ಹಣೆಗೆ, ಎಡ ಕೈಗೆ ರಕ್ತಗಾಯವಾಗಿರುತ್ತದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.