ಆಪರೇಷನ್ ಸಿಂಧೂರದ ಮೂಲಕ ಭಾರತದ ಸೇನೆ ಪಾಕಿಸ್ತಾನ ದ ಮೇಲೆ ಮುಗಿ ಬಿದ್ದಿದೆ. ದೇಶದೆಲ್ಲೆಡೆಯ ದೇಶ ಭಕ್ತರು ಭಯೋತ್ಪಾದನೆ ನಿಗ್ರಹ ಆಗಲೇ ಬೇಕು ಪಾಕಿಸ್ತಾನಕ್ಕೆ ಬುದ್ದಿ ಕಲಿಸಲೇ ಬೇಕು ಎಂಬ ಕೆಚ್ಚೆದೆಯ ನಿರ್ಧಾರದಲ್ಲಿದ್ದಾರೆ.
ಆದರೆ ಕಾರ್ಕಳದ ಶಿಕ್ಷಣ ಸಂಸ್ಥೆಯ ಹಾಸ್ಟೆಲ್ ನ ಶೌಚಾಲಯದಲ್ಲಿ ಹಿಂದೂಗಳನ್ನು ಕೆಣಕುವ ರೀತಿಯಲ್ಲಿ ಪ್ರಚೋದನಕಾರಿ ಬರಹಗಳನ್ನು ಬರೆದಿರುವ ಘಟನೆ ವರದಿ ಆಗಿದೆ. ದೇಶದ ಮಟ್ಟದಲ್ಲಿ ಗಮನ ಸೆಳೆದ ಕಾಲೇಜಿನಲ್ಲಿ ಈ ಘಟನೆ ನಡೆದಿದೆ
ಈ ಘಟನೆ ಮಹಿಳಾ ಹಾಸ್ಟೆಲ್ ನಲ್ಲಿ ನಡೆದಿದ್ದು ನಿನ್ನೆ ಈ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆ ಬಗ್ಗೆ ವಿದ್ಯಾರ್ಥಿ ಸಂಘಟನೆಗಳು ದಿಗ್ಭ್ರಮೆ ವ್ಯಕ್ತ ಪಡಿಸಿದ್ದು, ಯುದ್ಧದ ಸ್ಥಿತಿಯಲ್ಲಿ ಇಂತಹ ಘಟನೆಗಳನ್ನು ಪ್ರಚೋದಿಸುವವರ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈ ಗೊಳ್ಳ ಬೇಕು ಎಂದು ಆಗ್ರಹಿಸಿದ್ದಾರೆ

