ಮೇ 17ರಿಂದ 19ರವರೆಗೆ ಅತ್ತೂರು ಶ್ರೀ ಕ್ಷೇತ್ರ ಪರ್ಪಲೆ ಗಿರಿಯ ಕಲ್ಕುಡ, ಕಲ್ಲುರ್ಟಿ, ತೂಕತ್ತೇರಿ ದೈವಗಳ ಶಿಲಾಮಯ ಗರ್ಭ ಗುಡಿಯ ಲೋಕಾರ್ಪಣೆ, ಪುನರ್ ಪ್ರತಿಷ್ಠೆ ಹಾಗು ನೇಮೋತ್ಸವವು ನಡೆಯಲಿದೆ.
ವೈಭವದಿಂದ ನಡೆಯಲಿರುವ ಈ ಪುಣ್ಯ ಕಾರ್ಯದ ಬಗ್ಗೆ ಜನರಿಗೆ ಮಾಹಿತಿ ನೀಡುವ ಪ್ರಚಾರ ರಥಕ್ಕೆ ಶಿವತಿಕೆರೆ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು
ಈ.ಸಂದರ್ಭದಲ್ಲಿ ನ್ಯಾಯವಾದಿ ಎಂ ಕೆ.ವಿಫುಲ್ ಜೈನ್, ಬೋಳ ಪ್ರಶಾಂತ್ ಕಾಮತ್, ಡಾ. ರವೀಂದ್ರ ಶೆಟ್ಟಿ ಬಜಗೋಳಿ, ಸುಭಾಸ್ ಚಂದ್ರ ಹೆಗ್ಡೆ, ಸತ್ಯೇಂದ್ರ ಭಟ್, ಚೇತನ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು