ಕಾರ್ಕಳ

ಕಾರ್ಕಳ: ಮೋಟಾರ್ ಸೈಕಲ್‌ಗಳ ನಡುವೆ ಅಪಘಾತ

ಕಾರ್ಕಳ: ಇರ್ವತ್ತೂರು ಗ್ರಾಮದ ಜಂಗರಬೆಟ್ಟು ಕ್ರಾಸ್ ಎಂಬಲ್ಲಿ ಹಾದು ಹೋಗಿರುವ ದರೆಗುಡ್ಡೆ -ಮುರತ್ತಂಗಡಿ ರಸ್ತೆಯಲ್ಲಿ ಮೋಟಾರ್ ಸೈಕಲ್‌ಗಳ ನಡುವೆ ಅಪಘಾತ ಘಟನೆ ಏ. 21ರಂದು ವರದಿಯಾಗಿದೆ.

ಮುರತ್ತಂಗಡಿ ಕಡೆಯಿಂದ ದರೆಗುಡ್ಡೆ ಕಡೆಗೆ ಹೋಗುತ್ತಿದ್ದ ಮೋಟಾರ್ ಸೈಕಲ್ ಸವಾರನ ಅಜಾಗರೂಕತೆಯಿಂದ ದರೆಗುಡ್ಡೆಯಿಂದ ಇರ್ವತ್ತೂರು ಕಡೆಗೆ ಹೋಗುತ್ತಿದ್ದ ಶ್ರೇಯಸ್‌ರವರ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದಿದ್ದಾನೆ.

ಡಿಕ್ಕಿ ಪರಿಣಾಮ ಶ್ರೇಯಸ್ ಗಾಯಗೊಂಡಿದ್ದು, ಎರಡೂ ವಾಹನಗಳು ಜಖಂಗೊಂಡಿರುತ್ತವೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಕಾರ್ಕಳ ವೆಂಕಟರಾಯ ಕಾಮತ್ ನಿಧನ

Madhyama Bimba

ಕಾರ್ಕಳ: ಪಾದಚಾರಿಗೆ ದ್ವಿಚಕ್ರ ವಾಹನ ಡಿಕ್ಕಿ

Madhyama Bimba

ನೂತನ ಅಧ್ಯಕ್ಷರ ಆಯ್ಕೆಯಿಂದ ಪಕ್ಷಕ್ಕೆ ಬಲ: ಉದಯ ಶೆಟ್ಟಿ ಮುನಿಯಾಲು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More