ಕಾರ್ಕಳಹೆಬ್ರಿ

ಹೆಬ್ರಿ: ಚಿನ್ನ ಅಡವಿಟ್ಟು ಪೂರ್ತಿ ಹಣ ಕೊಡದೆ ವಂಚನೆ

ಹೆಬ್ರಿ: ಯುವತಿಯೋರ್ವರಿಗೆ ಪೈನಾನ್ಸ್‌ನಲ್ಲಿ ಹಣ ಕೊಡಿಸುವುದಾಗಿ ಹೇಳಿ ಚಿನ್ನವನ್ನು ಪಡೆದುಕೊಂಡು ಹಣವನ್ನು ಕೊಡದೆ ಮೋಸ ಮಾಡಿರುವ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಬ್ರಿ ಶೃತಿ (32), ಇವರು 2025, ಫೆಬ್ರವರಿ 23ರಂದು ತಾಯಿಯ ಅನಾರೋಗ್ಯದ ಕಾರಣದಿಂದ ತುರ್ತು ಚಿಕಿತ್ಸೆಗಾಗಿ ಹಣದ ಅಗತ್ಯವಿದ್ದುದರಿಂದ ಹೆಬ್ರಿ ಮುತ್ತೂಟ್ ಪೈನಾನ್ಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಪರಿಚಯದ ಮಂಜುನಾಥರವರಲ್ಲಿ ತಿಳಿಸಿದಾಗ ಅವರು ನಿಮ್ಮಲ್ಲಿ ಚಿನ್ನ ಇದ್ದರೆ ಕೊಡಿ ತಾನು ಪೈನಾನ್ಸ್‌ನಲ್ಲಿ ಇಟ್ಟು ಹಣ ಕೊಡುವುದಾಗಿ ತಿಳಿಸಿ, ಶೃತಿ ಅವರಿಂದ 3 ಪವನ್ ತೂಕದ ಕನಕ ಮಾಲೆ ಸರ 1, ತಲಾ 4 ಗ್ರಾಮ ತೂಕದ ಕಿವಿಯೋಲೆ ಒಂದು ಜೊತೆ, 1.5 ಗ್ರಾಂ ತೂಕದ ಲೇಡಿಸ್ ಉಂಗುರ -1, 4 ಪವನ್ ತೂಕದ ಹವಳದ ಸರ -1 ನ್ನು ಕೊಟ್ಟಿದ್ದು, ಮಂಜುನಾಥನು 70,000/- ರೂಪಾಯಿ ಹಣವನ್ನು ಶೃತಿಯವರ ಬ್ಯಾಂಕ್ ಖಾತೆಗೆ ಹಾಕಿದ್ದು ಉಳಿದ ಹಣವನ್ನು ಖಾತೆಗೆ ಹಾಕುವುದಾಗಿ ನಂಬಿಸಿ, ಅಲ್ಲದೆ ಚಿನ್ನವನ್ನು ಬಿಡಿಸಿ ಕೊಡುವುದಾಗಿ 70,000/- ಹಣವನ್ನು ಗೂಗಲ್ ಪೇ ಮುಖಾಂತರ ಹಾಕಿಸಿಕೊಂಡು, ಇದುವರೆಗೂ ಹಣವನ್ನು ಕೊಡದೆ ಅಥವಾ ಚಿನ್ನವನ್ನು ಬಿಡಿಸಿ ಕೊಡದೆ ಮೋಸ ಮಾಡಿರುತ್ತಾರೆ.

Related posts

ಶಿವಪುರ-1 ಶಾಲೆಯಲ್ಲಿ ಯಕ್ಷ ಶಿಕ್ಷಣ ತರಗತಿಗಳ ಉದ್ಘಾಟನೆ ಹಾಗೂ ವಿವಿಧ ಕೊಡುಗೆಗಳ ವಿತರಣೆ

Madhyama Bimba

ಬೆಳ್ಮಣ್ ವಲಯ ಬಂಟರ ಯಾನೆ ನಾಡವರ ಸಂಘದ ನೂತನ ನಿವೇಶನ ಅನಾವರಣ

Madhyama Bimba

ಸಾರ್ವಜನಿಕ ಶನಿಪೂಜಾ ಸಮಿತಿ ಕರಿಯಕಲ್ಲು ಮತ್ತು ವಿಶ್ವ ಹಿಂದೂ ಪರಿಷತ್ತಿನ ವತಿಯಿಂದ ಸುನಿಲ್ ಕೆ.ಆರ್ ಹುಟ್ಟು ಹಬ್ಬದ ಪ್ರಯುಕ್ತ ಅಶಕ್ತ ಕುಟುಂಬಕ್ಕೆ ಸೂರು- ಭೂಮಿ ಪೂಜೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More