ಕಾರ್ಕಳ : ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ 2025 -2028 ರ ಸಾಲಿನ ಅಧ್ಯಕ್ಷರಾಗಿ ವಾರ್ತಾಭಾರತಿ ಪತ್ರಿಕೆಯ ವರದಿಗಾರ ಮೊಹಮ್ಮದ್ ಶರೀಫ್ ಪುನರಾಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಸಂಜೆಪ್ರಭ ಪತ್ರಿಕೆ ವರದಿಗಾರ ಹರೀಶ್ ಪೂಜಾರಿ, ಕೋಶಾಧಿಕಾರಿಯಾಗಿ ಮಾಧ್ಯಮಬಿಂಬ ಪತ್ರಿಕೆಯ ವರದಿಗಾರ ಸತೀಶ್ ಎಚ್ ಶೆಟ್ಟಿ, ಆಯ್ಕೆಯಾಗಿದ್ದಾರೆ .
ಉಪಾಧ್ಯಕ್ಷರಾಗಿ ವಿ4 ಚಾನೆಲ್ ನ ಕೆ ಎಂ ಖಲೀಲ್ , ಜೊತೆ ಕಾರ್ಯದರ್ಶಿಯಾಗಿ ಉದಯವಾಣಿ ಪತ್ರಿಕೆಯ ಜಗದೀಶ್ ಅಂಡಾರು ಅಯ್ಕೆಯಾಗಿದ್ದಾರೆ .
ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯರಾಗಿ ನಮ್ಮ ಟಿವಿ ವರದಿಗಾರ ಅರುಣ್ ಭಟ್ ಭಟ್ ಕೈಲಾಜೆ, ಮಾಧ್ಯಮಬಿಂಬ ವರದಿಗಾರ ಹರೀಶ್ ಆಚಾರ್ಯ, ಪ್ರಜಾವಾಣಿ ವರದಿಗಾರ ವಾಸುದೇವ ಭಟ್, ಉದಯವಾಣಿ ವರದಿಗಾರ ಅವಿನಾಶ್ ಬಿ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು.
ಕಾರ್ಕಳ ಪತ್ರಿಕಾ ಭವನದಲ್ಲಿ ನಡೆದ ಚುನಾವಣೆಯಲ್ಲಿ ಚುನಾವಣಾಧಿಕಾರಿಯಾಗಿ ಜಿಲ್ಲಾ ಪತ್ರಕರ್ತರಾ ಸಂಘದ ಅಧ್ಯಕ್ಷರಾದ ಸುಬ್ರಮಣ್ಯ ಜಿ ಕುರ್ಯ, ಸಹಾಯಕ ಚುನಾವಣಾ ಅಧಿಕಾರಿಯಾಗಿ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಕಾರ್ಯ ನಿರ್ವಹಿಸಿದರು.
