ಮೂಡುಬಿದಿರೆ ತಾಲೂಕಿನ ಬೋರುಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದ್ವಿಭಾಷಾ ಮಾಧ್ಯಮ ತರಗತಿಗಳ ಉದ್ಘಾಟನೆ ಹಾಗೂ ದಾನಿಗಳಿಂದ ನೀಡಲಾದ ಕಲಿಕೆಗೆ ಪ್ರೋತ್ಸಾಹದಾಯಕ ವಸ್ತುಗಳ ವಿತರಣೆ ಮತ್ತು ಮುಖ್ಯ ಶಿಕ್ಷಕರಾಗಿ ಭಡ್ತಿ ಹೊಂದಿದ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.

ವೇದಿಕೆಯಲ್ಲಿ ಗ್ರಾಮ ಪಂಚಾಯಿತ್ ನೆಲ್ಲಿಕಾರು ಮಾಜಿ ಅಧ್ಯಕ್ಷರು ಉದಯ ಪೂಜಾರಿ , ಜಯಂತ್ ಹೆಗ್ಡೆ, ಪರಶುರಾಮ ಸೇವಾ ಘಟಕದ ಸಂಚಾಲಕರಾದ ದಿನೇಶ್ ಪೂಜಾರಿ, ವಿದ್ಯಾಭಿಮಾನಿಗಳಾದ ಪಿಜಿನ ಪೂಜಾರಿ, ಸುಂದರ ಹೆಗ್ಡೆ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ,ಪೋಷಕರು ಅಧ್ಯಾಪಕ ವೃಂದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕರಾಗಿ ಭಡ್ತಿ ಪಡೆದ ಶ್ರೀಮತಿ ಅನುಸೂಯ ಮತ್ತು
ಸುರೇಂದ್ರ ಕುಮಾರ್ ಅವರಿಗೆ ಗೌರವ ಸ್ಮರಣಿಕೆ ನೀಡಿ ಬೀಳ್ಕೊಡಲಾಯಿತು.
