ಮೂಡುಬಿದಿರೆ ಪಡುಮಾರ್ನಾಡು ಗ್ರಾಮದ ಬನ್ನಡ್ಕ ಪಾಡ್ಯಾರ್ ರಸ್ತೆಯ ಇಕ್ಕೆಲಗಳಲ್ಲಿ ಗಿಡ ಗಂಟಿ ಮುಳ್ಳಿನ ಗಿಡಗಳಿಂದ ಅವರಿಸಿಕೊಂಡಿದ್ದು ವಾಹನ ಸವಾರರಿಗೆ ತುಂಬಾ ತೊಂದರೆ ಯಾಗುತ್ತಿದ್ದು,ಇದನ್ನು ಮನಗಂಡ ಸ್ಥಳೀಯ ಯುವಕರು ಭಾನುವಾರ ದಂದು ಶ್ರಮದಾನ ಮಾಡುವ ಮೂಲಕ ಗಿಡ ಗಂಟಿಗಳನ್ನು ತೆರವು ಗೊಳಿಸಿದರು.
ಸ್ಥಳೀಯರಾದ ಪದ್ಮನಾಭ ಪೂಜಾರಿ, ಪ್ರದೀಪ್ ಆಚಾರ್ಯ, ಪ್ರತಾಪ್ ಪೂಜಾರಿ, ಪ್ರದೀಪ್ ಪೂಜಾರಿ, ಅಶೋಕ್ ದೇವಾಡಿಗ, ಪುನೀತ್ ದೇವಾಡಿಗ, ಪ್ರವೀಣ್, ವಿನೀತ್ ಪೂಜಾರಿ, ಪ್ರಸಾದ್ ಆಚಾರ್ಯ ಹಾಗು ಶಿಶುಪಾಲ್ ರವರು ಉಚಿತ ಹುಲ್ಲು ಕತ್ತರಿಸುವ ಯಂತ್ರ ನೀಡುವ ಮೂಲಕ ಶ್ರಮದಾನಕ್ಕೆ ಸಹಕರಿಸಿದರು
