ಲಯನ್ಸ್ ಕ್ಲಬ್ ಕಾರ್ಕಳ ಸಿಟಿ ವತಿಯಿಂದ ಮಾಳ ಗ್ರಾಮದ ಲಕ್ಷ್ಮಣ್ ನಾಯಕ ಅವರ ಕುಟುಂಬಕ್ಕೆ ಅಗತ್ಯವಿರುವ ಅಕ್ಕಿ ಮತ್ತು ದಿನಸಿ ಸಾಮಗ್ರಿಗಳನ್ನು, ರೂ. 2000ವನ್ನು ಹಾಗೂ ಸುರಕ್ಷಾ ಆಶ್ರಮಕ್ಕೆ 20ಕೆಜಿ ಕಜೆ ಅಕ್ಕಿ ಮತ್ತು ಕಮರ್ಷಿಯಲ್ ಗ್ಯಾಸ್ ಸ್ಟವ್ ಅನ್ನು ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಲಯನ್ ರಘುನಾಥ್ ಕೆ. ಎಸ್., ಕಾರ್ಯದರ್ಶಿ ಲಯನ್ ನಿಹಾಲ್ ಶೆಟ್ಟಿ ಜಕ್ಕನ್ ಮಕ್ಕಿ, ಕೋಶಾಧಿಕಾರಿ ಟಿ. ಕೆ. ರಘುವೀರ್, ಸ್ಥಾಪಕ ಅಧ್ಯಕ್ಷರು ಲಯನ್ ಜ್ಯೋತಿ ರಮೇಶ್, ಸದಸ್ಯರು ಲಯನ್ ಯೋಗೇಶ್ ನಾಯಕ್ ಮತ್ತು ಲಯನ್ ಧರ್ಮರಾಜ್ ಕೆ. ಉಪಸ್ಥಿತರಿದ್ದರು.
