ಕಾರ್ಕಳಮೂಡುಬಿದಿರೆಹೆಬ್ರಿ

ಲೆಕ್ಕ ಪರಿಶೋಧಕರ ಆಯ್ಕೆ ಪತ್ರ ಸಲ್ಲಿಸಲು ಸೂಚನೆ

ಜಿಲ್ಲೆಯ ಸಹಕಾರ ಸಂಘಗಳು/ಸೌಹಾರ್ದ ಸಹಕಾರಿಗಳು ತಮ್ಮ ವಾರ್ಷಿಕ ಮಹಾಸಭೆಯಲ್ಲಿ 2024-25ನೇ ಸಾಲಿನ ಲೆಕ್ಕಪರಿಶೋಧನೆಗಾಗಿ ಲೆಕ್ಕಪರಿಶೋಧಕರನ್ನು ಅಥವಾ ಲೆಕ್ಕಪರಿಶೋಧನಾ ಫರ್ಮನ್ನು ಆಯ್ಕೆ ಮಾಡಿಕೊಂಡ ಮಾಹಿತಿಯನ್ನು ಸಾಮಾನ್ಯ ಸಭೆ ನಡೆದ ಏಳು ದಿನಗಳೊಳಗಾಗಿ ಮುಖ್ಯ ಕಾರ್ಯನಿರ್ವಾಹಕರು ಸಭೆಯ ನಡವಳಿಯ ದೃಡೀಕೃತ ಪ್ರತಿಯನ್ನು ಕಾಯ್ದೆ/ನಿಯಮಾವಳಿಯಂತೆ ಈ ಕಛೇರಿಗೆ ಸಲ್ಲಿಸಬೇಕಿರುತ್ತದೆ.


ಇದುವರೆಗೂ ಮಾಹಿತಿ ಸಲ್ಲಿಸದ ಸಹಕಾರ ಸಂಘಗಳು/ಸೌಹಾರ್ದ ಸಹಕಾರಿಗಳು ಪ್ರಕಟಣೆ ಪ್ರಕಟವಾದ ಮೂರು ದಿನಗಳ ಒಳಗಾಗಿ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪನಿರ್ದೇಶಕರ ಕಛೇರಿ, ಸಿತಾರಾ ಕಾಂಪ್ಲೆಕ್ಸ್, 2ನೇ ಮಹಡಿ, ಹಳೆ ಅಂಚೆಕಛೇರಿ ರಸ್ತೆ, ಉಡುಪಿ ಇಲ್ಲಿಗೆ ಮುದ್ದಾಂ ಆಗಿ ಬಂದು ಮಾಹಿತಿಯನ್ನು ಕಡ್ಡಾಯವಾಗಿ ಸಲ್ಲಿಸಿ ಸ್ವಿಕೃತಿ ಪಡೆದುಕೊಳ್ಳಬಹುದಾಗಿದೆ.

ನಿಗದಿಪಡಿಸಿದ ಅವಧಿಯೊಳಗಾಗಿ ಆಯ್ಕೆ ಮಾಹಿತಿ ಸಲ್ಲಿಸದೇ ಇರುವ ಸಹಕಾರ ಸಂಘಗಳು/ ಸೌಹಾರ್ದ ಸಹಕಾರಿಗಳ 2024-25ನೇ ಸಾಲಿನ ಲೆಕ್ಕಪರಿಶೋಧನೆಗೆ ಲೆಕ್ಕಪರಿಶೋಧಕರನ್ನು ಆಯ್ಕೆ ಮಾಡಿಕೊಂಡಿಲ್ಲವೆಂದು ಪರಿಗಣಿಸಿ, ಅಂತಹ ಸಹಕಾರ ಸಂಘಗಳ ಲೆಕ್ಕಪರಿಶೋಧನೆಗೆ ಕಾಯ್ದೆಯ ಅವಕಾಶದಂತೆ ಇಲಾಖೆಯು ನಿರ್ವಹಿಸುವ ಲೆಕ್ಕಪರಿಶೋಧಕರ ಪ್ಯಾನಲ್‌ನಿಂದ ಅರ್ಹ ಲೆಕ್ಕಪರಿಶೋಧಕ ಅಥವಾ ಫರ್ಮನ್ನು ಲೆಕ್ಕಪರಿಶೋಧನಾ ಕಾರ್ಯಕ್ಕೆ ನೇಮಿಸಿ ಆದೇಶಿಸಲಾಗುವುದು ಮತ್ತು ಅಂತಹ ಆದೇಶವೇ ಅಂತಿಮವಾಗಿರುತ್ತದೆ ಎಂದು ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಉಪ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

Related posts

ಕಡ್ತಲ ಗ್ರಾಮ ಪಂಚಾಯತ್: ಕಾಂಗ್ರೆಸ್‌ಗೆ ಗೆಲುವು

Madhyama Bimba

ತಾಲೂಕು ಸರ್ವೆ ಅಧಿಕಾರ ದರ್ಪ ಲಂಚಕ್ಕಾಗಿ ಬೇಡಿಕೆ: ಲೋಕಾಯುಕ್ತಕ್ಕೆ ದೂರು

Madhyama Bimba

ಶ್ರೀ ಮಹಾವೀರ ಕಾಲೇಜಿನಲ್ಲಿ ಕಾಮರ್ಸ್ ಫೆಸ್ಟ್-ಅಶ್ವಮೇಧ-2024

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More