ಕುಚ್ಚೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾ. 24ರಂದು ವರ್ಷಂಪ್ರತಿಯಂತೆ ಜರಗುವ ರಂಗಪೂಜಾ ಮಹೋತ್ಸವ ಹಾಗೂ ಕೆಂಡೋತ್ಸವವು ವೇದಮೂರ್ತಿ ಪ್ರೇಮಚಂದ್ರ ತಂತ್ರಿಯವರ ನೇತ್ರತ್ವದಲ್ಲಿ ಜರುಗಲಿದೆ.

ಅಂದು ಪೂರ್ವಾಹ್ನ ಗಂಟೆ 8.00ಕ್ಕೆ ಪುಣ್ಯಾಹವಾಹನ, ಗಂಟೆ 12.00ಕ್ಕೆ ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ಉತ್ಸವ ಬಲಿ, ಮಧ್ಯಾಹ್ನ ಗಂಟೆ 12.30ಕ್ಕೆ ಅನ್ನಸಂತರ್ಪಣೆ, ಅಪರಾಹ್ನ ಗಂಟೆ 6.00ರಿಂದ 7.00ರವರೆಗೆ ಭಜನೆ, ಸಂಜೆ 7.00ಕ್ಕೆ ಮಹಾಲಿಂಗೇಶ್ವರನ ಉತ್ಸವ ಬಲಿ, 8.30ಕ್ಕೆ ರಂಗಪೂಜೆ, ರಾತ್ರಿ ಗಂಟೆ 10.30ಕ್ಕೆ ಕಲ್ಲುಕುಟ್ಟಿಗನ ಕೋಲ, ಗಂಟೆ 1.30ಕ್ಕೆ ಅಮ್ಮನವರ ಕೆಂಡೋತ್ಸವ, ದೈವ ಸಂದರ್ಶನ, ಮಹಾಪ್ರಸಾದ ವಿತರಣೆ ನಡೆಯಲಿದೆ.
