ಕಾರ್ಕಳ: ವ್ಯಕ್ತಿಯೋರ್ವರು ಅನಾರೋಗ್ಯದಿಂದ ಮೃತ್ಯುವೀಗೀಡಾದ ಘಟನೆ ಮೇ. 19೯ರಂದು ವರದಿಯಾಗಿದೆ.
ಕೇರಳ ತಿರುವನಂತಪುರ ಜಿಲ್ಲೆಯ ಮಹಮ್ಮದ್ ಕುಂಜು ಮೃತಪಟ್ಟವರು.
ಇವರಿಗೆ ವಿಪರೀತ ಮದ್ಯಪಾನದ ಚಟವಿದ್ದು, ಮಧುಮೇಹ ಖಾಯಿಲೆಯಿಂದ ಬಳಲುತ್ತಿದ್ದರು.
ಕಳೆದ ೩ ವರ್ಷಗಳಿಂದ ಈದು ಗ್ರಾಮದ ಹೊಸ್ಮಾರಿನಲ್ಲಿ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದರು.
ಹೊಟ್ಟೆ ನೋವೆಂದು ತೋಟದಲ್ಲಿರುವ ಶೆಡ್ನಲ್ಲಿ ಮಲಗಿದ್ದವರು ರಾತ್ರಿಯಾದರೂ ಏಳದೇ ಇದ್ದು, ಮಹಮ್ಮದ್ ಕುಂಜು ರವರನ್ನು ಮಾತನಾಡಿಸಿದಾಗ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದುದರಿಂದ ಕೂಡಲೇ 108 ಆಂಬ್ಯುಲೆನ್ಸ್ ವಾಹನಕ್ಕೆ ಪೋನ್ ಮಾಡಿ ತಿಳಿಸಿದ್ದು, ಆಂಬ್ಯುಲೆನ್ಸ್ನ ಸಿಬ್ಬಂದಿಯವರು ಮಹಮ್ಮದ್ ಕುಂಜುರವರು ಮೃತಪಟ್ಟ ಬಗ್ಗೆ ತಿಳಿಸಿರುತ್ತಾರೆ.
ಇವರು ಮಧುಮೇಹ ಖಾಯಿಲೆಯಿಂದ ಬಳಲುತ್ತಿದ್ದು ಅವರಿಗಿರುವ ಖಾಯಿಲೆ ಉಲ್ಬಣಗೊಂಡು ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿರುವುದಾಗಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
