ಹೆಬ್ರಿ: ವ್ಯಕ್ತಿಯೋರ್ವರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ ಘಟನೆ ಜ. 19ರಂದು ವರದಿಯಾಗಿದೆ.
ವರಂಗ ಗ್ರಾಮದ ಮಾತಿಬೆಟ್ಟು ನಿವಾಸಿ ವಿದ್ಯಾನಂದ ಶೆಟ್ಟಿ (45) ಹಲ್ಲೆಗೊಳಗಾದವರು.

ವರಂಗ ಮಾತಿಬೆಟ್ಟು ನಿವಾಸಿ ಪ್ರಕಾಶ ತೆಲಿಗ ಎಂಬವರು ವಿದ್ಯಾನಂದ ಶೆಟ್ಟಿಯವರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ತನಗೆ ವರಂಗ ಸಹಕಾರಿ ಬ್ಯಾಂಕಿನಲ್ಲಿ ಇರುವ ಸಾಲದ ಬಗ್ಗೆ ಅಲ್ಲಿ ಕೆಲಸ ಮಾಡುವ ನಿನ್ನ ಅಕ್ಕನಿಗೆ ಹೇಳಿಸಿ ನೀನು ನೋಟಿಸ್ ಜ್ಯಾರಿ ಮಾಡುತ್ತಿ ಎಂದು ಅವಾಚ್ಯ ಶಬ್ದಗಳಿಂದ ಬೈದು, ಕಲ್ಲಿನಿಂದ ಹಲ್ಲೆ ಮಾಡಿರುತ್ತಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
