ಬೈಲೂರು: ನಾಟಕ ರಂಗದಲ್ಲಿ ಮುಂಚೂಣಿ ತಂಡವಾಗಿ ಪ್ರಚಲಿತದಲ್ಲಿರುವ ಚೈತನ್ಯ ಕಲಾವಿದರು ಬೈಲೂರು ಅವರ ಈ ವರ್ಷದ ತುಳು ಹಾಸ್ಯಮಯ ನಾಟಕದ ಶೀರ್ಷಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಈ ಹಿಂದೆ ವಿಭಿನ್ನ ನಾಟಕಗಳನ್ನು ಜನರಿಗೆ ನೀಡುತ್ತಾ ಪ್ರಶಂಸೆಯ ತಂಡವಾಗಿ ಹೊರಹೊಮ್ಮಿದ ಚೈತನ್ಯ ಕಲಾವಿದರು ತಂಡದ ಈ ವರ್ಷದ ನಾಟಕ ಊರು ಬೋಡು ಪುದರ ಬೊಡ್ಚಿ ಶೀರ್ಷಿಕೆಯನ್ನು ತಂಡದ ಸಾರಥಿ ನಾಟಕದ ಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಲಿರುವ ಪ್ರಸನ್ನ ಶೆಟ್ಟಿ ಬೈಲೂರು ಬಿಡುಗಡೆಗೊಳಿಸಿದರು.
ಇದು ಪ್ರಸನ್ನ ಶೆಟ್ಟಿ ಯವರ 12ನೇ ನಾಟಕವಾಗಿದ್ದು, ನಾಟಕದಲ್ಲಿರುವ ಸಂದೇಶವನ್ನು ವೀಕ್ಷಿಸಲು ಕಲಾಭಿಮಾನಿಗಳು ಕಾತರದಲ್ಲಿದ್ದಾರೆ
