ಕಾರ್ಕಳ ಶಾರದಾ ಮಹಿಳಾ ಮಂಡಳಿ ನೇತೃತ್ವದಲ್ಲಿ ನಮ್ಮ ನಡೆ- ಕೃಷಿಯ ಕಡೆ ಕಾರ್ಯಕ್ರಮವು ಪರಪ್ಪುವಿನ ಶ್ರೀಮತಿ ಗಾಯತ್ರಿ ಮತ್ತು ವಿಶ್ವನಾಥ ಪ್ರಭು ಇವರ ಮನೆಯ ಗದ್ದೆಯಲ್ಲಿ ಜು. 06ರಂದು ಜರಗಿತು.
ಶಾರದಾ ಮಹಿಳಾ ಮಂಡಳಿ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಫಾಟಕ್, ಉಪಾಧ್ಯಕ್ಷೆ ಶ್ರೀಮತಿ ಸ್ವಾತಿ ಸಂತೋಷ್, ಮಂಡಳಿಯ ಹಿತೈಷಿ ಶ್ರೀಮತಿ ಜ್ಯೋತಿ ಜೆ ಪೈ ಹಾಗೂ ಸದಸ್ಯೆಯರು ನಾಟಿ ಮಾಡಲು ಬಂದ ಮಹಿಳೆಯರ ಜೊತೆ ಸೇರಿ, ಓ..ಬೇಲೆ ಹಾಡಿ, ನೇಜಿ ನೆಟ್ಟು ಸಂತಸಪಟ್ಟರು.
ಶ್ರೀಮತಿ ಸ್ವಾತಿ ಸಂತೋಷ್ರವರು ಸದಸ್ಯೆಯರಿಗೆ ಕೊಟ್ಟ ಅವಕಾಶಕ್ಕಾಗಿ ಮಂಡಳಿಯ ಪರವಾಗಿ ಪ್ರಭು ದಂಪತಿಗಳಿಗೆ ಕೃತಜ್ಞತೆ ಸಲ್ಲಿಸಿದರು.
