ಕಣಜದ ಹುಳು ದಾಳಿ ಮಾಡಿ ಮಹಿಳೆ ಸಾವನ್ನಪ್ಪಿದ ಘಟನೆ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಕಜೆಯಲ್ಲಿ ಆದಿತ್ಯವಾರ ಮಧ್ಯಾಹ್ನ ನಡೆದಿದೆ.

ಕಲ್ಯಾಣ ಸಪಳಿಗ 68 ವರ್ಷ ಸಾವನ್ನಪ್ಪಿದ ಮಹಿಳೆ.
ಮನೆಯ ಸಮೀಪ ಮಧ್ಯಾಹ್ನದ ವೇಳೆ ಮೇಲೆ ಬೀಡಿ ಕೊಟ್ಟು ಬರುವಾಗ ಏಕಾಏಕಿ ಕಣಜದ ಹುಳುಗಳು ದಾಳಿ ಮಾಡಿವೆ. ಕೂಡಲೇ ಕಟೀಲು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
