ಶ್ರೀ ವಿನಾಯಕ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟ (ರಿ) ಬೈಲೂರು ಇದರ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಶಾಲಿನಿ ಸುಕೇಶ್ ಪೂಜಾರಿ, ಕಾರ್ಕಳ ಸಂಗಮ ಸಂಜೀವಿನಿ ತಾಲೂಕು ಮಟ್ಟದ ಅಧ್ಯಕ್ಷರಾದ ಶ್ರೀಮತಿ ರೇವತಿ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರು ಹಾಗೂ ಸಂಜೀವಿನಿ ಸದಸ್ಯರಾದ ನೀರೆ ಬೈಲೂರಿನ ಮಾಲಿನಿ ಜೆ.ಶೆಟ್ಟಿ, ಜೀವನೋಪಾಯ ಸಮಿತಿಯ ಅಧ್ಯಕ್ಷರಾದ ತಸ್ವಿನ್ ಹಾಗೂ ಕಾರ್ಯದರ್ಶಿ ಸರೋಜ ಉಪಸ್ಥಿತರಿದ್ದರು.
ಸಂಜೀವಿನಿ ಸದಸ್ಯರಾದ ಶ್ರೀಮತಿ ರತಿ, ರೇವತಿ ಮೆಡಂ, ಮಾಲಿನಿ ಇವರು ಆಟಿ ತಿಂಗಳ ಆಹಾರ ಪದಾರ್ಥಗಳ ಬಗ್ಗೆ, ಔಷದಿಗಳ ಬಗ್ಗೆ ಹಿಂದಿನ ಕಾಲದ ಸ್ಥಿತಿಗತಿಗಳ ಬಗ್ಗೆ ಸವಿವಿಸ್ತಾರವಾಗಿ ತಿಳಿಸಿದರು.
ಸುಜಾತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಚೇತನಾ ಸ್ವಾಗತಿಸಿದರು. ಸೌಮ್ಯ ಧನ್ಯವಾದವಿತ್ತರು.
