ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ ಸಂಬಂಧಿತ ಜಿಲ್ಲಾ ಮಟ್ಟದ ವಿಜ್ಞಾನ,ಗಣಿತ ಮತ್ತು ಸಂಸ್ಕೃತಿ ಜ್ಞಾನ ಮೇಳದ ಕಿಶೋರ ವರ್ಗದಲ್ಲಿ ಹೆಬ್ರಿ ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ 8 ಪ್ರಥಮ ಸ್ಥಾನ ಸಹಿತ ಒಟ್ಟು 16 ಪ್ರಶಸ್ತಿ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕ್ಲೇ ಮೊಡೆಲಿಂಗ್ ನಲ್ಲಿ ಚಿರಾಗ್ ಪ್ರಥಮ ಸ್ಥಾನ , ಆಶುಭಾಷಣದಲ್ಲಿ ಗಗನ್ ಪ್ರಥಮ ಸ್ಥಾನ , ಗಣಿತ ಪ್ರಯೋಗದಲ್ಲಿ ವರ್ಷಿತ್ ಪ್ರಥಮ ಸ್ಥಾನ , ಕ್ಷೇತ್ರ ಗಣಿತ ಸಂಬಂಧಿಸಿದ ಮಾದರಿ ಪ್ರದರ್ಶನದಲ್ಲಿ ಆತ್ರೇಯ ಹೆಬ್ಬಾರ್ ಪ್ರಥಮ ಸ್ಥಾನ , ವಿಜ್ಞಾನ ಪ್ರಯೋಗದಲ್ಲಿ ಪಲ್ಲವಿ ಪ್ರಥಮಸ್ಥಾನ , ವಿಜ್ಞಾನ ಪರಮಾಣು ರಚನೆ ಮಾದರಿ ಪ್ರದರ್ಶನದಲ್ಲಿ ಐಸಿರಿ ಎಂ ಪ್ರಥಮ ಸ್ಥಾನವನ್ನು , ವಿಜ್ಞಾನ ಮಾನವನ ಹೃದಯದ ಕಾರ್ಯ ವಿಧಾನದ ಮಾದರಿ ಪ್ರದರ್ಶನದಲ್ಲಿ ಸ್ಮಿತಿ ಪ್ರಥಮ ಸ್ಥಾನವನ್ನು , ವಿಜ್ಞಾನ ನವಚಾರಿತ ಮಾದರಿಯಲ್ಲಿ ಪ್ರದ್ವಿತ್ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ಹಾಗೆಯೇ ವಿಜ್ಞಾನ ಪತ್ರವಾಚನದಲ್ಲಿ ಆತ್ರೇಯ ನಾಯಕ್ ದ್ವಿತೀಯ ಸ್ಥಾನವನ್ನು , ವಿಜ್ಞಾನ ಸೆನ್ಸಾರ್ ಮಾದರಿ ಪ್ರದರ್ಶನದಲ್ಲಿ ಮಂಜುನಾಥ ದ್ವಿತೀಯ ಸ್ಥಾನ , ಸಂಸ್ಕೃತಿ ಜ್ಞಾನ ರಸಪ್ರಶ್ನೆಯಲ್ಲಿ ಸಂಕೇತ್ ಪೈ, ಚಿರಂತನ್, ನಿವೇದಿತಾ ದ್ವಿತೀಯ ಸ್ಥಾನವನ್ನು , ಗಣಿತ ಸಂಶೋಧನಾರ್ಹ ಮಾದರಿ ಪ್ರದರ್ಶನದಲ್ಲಿ ಶ್ರೀನಿವಾಸ ದ್ವಿತೀಯ ಸ್ಥಾನ, ಗಣಿತ ಮಾದರಿ ಪ್ರದರ್ಶನದಲ್ಲಿ ವಿಕಾಸ್ ದ್ವಿತೀಯ ಸ್ಥಾನ , ವಿಜ್ಞಾನ ಚಲನೆ ಮಾದರಿ ಪ್ರದರ್ಶನದಲ್ಲಿ ಸಾಯಿರಾಂ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ವೇದ ಗಣಿತ ರಸಪ್ರಶ್ನೆಯಲ್ಲಿ ಅವನಿ, ಸಾನ್ವಿ, ಗಗನ್ಯ ತೃತೀಯ ಸ್ಥಾನವನ್ನು , ವಿಜ್ಞಾನ ರಸಪ್ರಶ್ನೆಯಲ್ಲಿ ಪ್ರಥಮ್ ಎನ್ ರಾವ್, ಆಯುಷ್ ಪೈ, ಅವಿಘ್ನ ತೃತೀಯ ಸ್ಥಾನ , ಪಡೆದಿದ್ದಾರೆ.
