ಕಾರ್ಕಳ: ಈದು ಹೊಸ್ಮಾರು ಕಾರ್ಕಳ- ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ರಿಕ್ಷಾಕ್ಕೆ ಈಕೋವಾಹನ ಡಿಕ್ಕಿಯಾದ ಘಟನೆ ಆ. 23ರಂದು ವರದಿಯಾಗಿದೆ.
ಈದುವಿನ ಸದಾನಂದ (೫೪)ರವರು ತನ್ನ ರಿಕ್ಷಾವನ್ನು ರಸ್ತೆ ಬದಿ ನಿಲ್ಲಿಸಿದ್ದು, ಈ ಸಂದರ್ಭ ಕಾರ್ಕಳದಿಂದ ಧರ್ಮಸ್ಥಳ ಕಡೆಗೆ ಹೋಗುತ್ತಿದ್ದ ಈಕೋವಾಹನದ ಚಾಲಕ ಜಗದೀಶ್ ಮದ್ಯಪಾನ ಸೇವಿಸಿ ವಾಹನ ಚಲಾಯಿಸಿದ ಪರಿಣಾಮ ರಿಕ್ಷಾಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ.
ಡಿಕ್ಕಿಯ ಪರಿಣಾಮ ರಿಕ್ಷಾದ ಹಿಂಬಾಗ ಮತ್ತು ಇಕೋ ವಾಹನದ ಮುಂಬಾಗ ಜಖಂಗೊಂಡಿರುತ್ತದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
