ನಿವ್ರತ್ತ ಉಪ ತಹಶೀಲ್ದಾರ್ ಶಿವರಾಂ ನಿಧನ
ಕಾರ್ಕಳ: ಕುಕುಂದೂರು ನಿವಾಸಿ ಆಹಾರ ಇಲಾಖೆಯ ನಿವೃತ ಉಪ ತಹಶೀಲ್ದಾರ್ ಶಿವರಾಂ ಕೆ. (68 ವ) ಆಗಸ್ಟ್ 24 (ಇಂದು) ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.
ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕಾರ್ಕಳ ತಾಲೂಕು ಕಚೇರಿಯಲ್ಲಿ ಕ್ಲರ್ಕ್ ಆಗಿ ಸರಕಾರಿ ಉದ್ಯೋಗಕ್ಕೆ ಸೇರಿಕೊಂಡ ಇವರು ನಂತರ ಗ್ರಾಮಕರಣಿಕರಾಗಿ, ಕಂದಾಯ ನಿರೀಕ್ಷಕರಾಗಿ ವಿವಿದೆಡೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ನಿವೃತ್ತಿಯ ಸಮಯದಲ್ಲಿ ಅವರು ಆಹಾರ ಇಲಾಖೆಯಲ್ಲಿ ಉಪ ತಾಶಿಲ್ದರಾಗಿ ಸೇವೆ ಸಲ್ಲಿಸುತ್ತಿದ್ದರು.
