ಕಾರ್ಕಳ

ಗಮನ ಸೆಳೆಯಿತು ಗ್ಯಾರಂಟಿ ಅಧ್ಯಕ್ಷರ ದಾನ ಕಾರ್ಯ

ಮೂಡುಬಿದಿರೆ ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿಯವರು ತನ್ನ ವಿಶಿಷ್ಟ ಕಾರ್ಯವೈಖರಿಯಿಂದಾಗಿ ಜನರ ಗಮನ ಸೆಳೆದಿದ್ದಾರೆ.


ತನಗೆ ಸಿಕ್ಕ ಗೌರವಧನವನ್ನು ವಿದ್ಯಾರ್ಥಿಗಳಿಬ್ಬರಿಗೆ ಹಂಚಿ ನೀಡುವ ಮೂಲಕ ಮತ್ತೊಮ್ಮೆ ತನ್ನ ಸೇವಾ ಪ್ರೌಢಿಮೆ ಮೆರೆದಿದ್ದಾರೆ. ಸಮಾಜದಲ್ಲಿ ಸೇವಾ ಕಾರ್ಯಕ್ಕಾಗಿ ಅವರು ಮಾದರಿಯಾಗಿದ್ದಾರೆ.


ಪಿಯುಸಿ ವಿದ್ಯಾರ್ಥಿ ವಾಲ್ಪಾಡಿ ಕೌಶಿಕ್ ಪೂಜಾರಿ ಹಾಗೂ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡ ಬೆಳುವಾಯಿಯ ಐದನೇ ತರಗತಿ ವಿದ್ಯಾರ್ಥಿ ಶ್ಲೋಕ ಶೆಟ್ಟಿ ಅವರಿಗೆ ತನ್ನ ಗೌರವ ಧನವನ್ನು ಹಂಚಿ ನೀಡಿದ್ದಾರೆ.

ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಬಳಿಕ ಅರುಣ್ ಶೆಟ್ಟಿ ಮೂಡುಬಿದಿರೆಗೆ ಸರಕಾರಿ ಬಸ್ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Related posts

ದಕ್ಷಿಣ ವಲಯ ಗಣರಾಜ್ಯೋತ್ಸವ ಪೂರ್ವ ಪರೇಡ್ ಆಯ್ಕೆ ಶಿಬಿರದಲ್ಲಿ ಪಾಲ್ಗೊಳ್ಳಲಿರುವ ನಿಟ್ಟೆ ವಿದ್ಯಾರ್ಥಿನಿ

Madhyama Bimba

ಡಿ. 19: ಜಿಲ್ಲಾ ಮಟ್ಟದ ಕೈಗಾರಿಕಾ ಸ್ಪಂದನ ಕಾರ್ಯಕ್ರಮ

Madhyama Bimba

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ. ಮಂಗಳೂರಿಗೆ ಪ್ರತಿಷ್ಠಿತ “ಸಹಕಾರ ಮಾಣಿಕ್ಯ” ಪ್ರಶಸ್ತಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More