ಮೂಡುಬಿದಿರೆ

ಶಿರ್ತಾಡಿ, ಕಲ್ಲಬೆಟ್ಟಿಗೆ ಪ್ರತ್ಯೇಕ ಕೃಷಿ ಪತ್ತಿನ ಸಹಕಾರಿ ಸಂಘ

ಮೂಡುಬಿದಿರೆ ತಾಲೂಕಿನ ಶಿರ್ತಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನತೆಯ ಪ್ರತ್ಯೇಕ ಸಹಕಾರಿ ಸಂಘದ ಬಹು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ. ಕಲ್ಲಬೆಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧೀನಕ್ಕೊಳಪಟ್ಟಿದ್ದ ಶಿರ್ತಾಡಿ ಪಡು ಮೂಡುಕೊಣಾಜೆ ಗ್ರಾಮಗಳಿಗೆ ಪ್ರತ್ಯೇಕ ಸಹಕಾರಿ ಸಂಘ ಒದಗಿ ಬಂದಂತಾಗಿದೆ. ಶಿರ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ(ನಿ.) ಶಿರ್ತಾಡಿ ಎಂಬುದಾಗಿ ನಾಮಕರಣಗೊಳಿಸಿ ಪ್ರಮಾಣಿಕರಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಕಲ್ಲಬೆಟ್ಟು ಗ್ರಾಮಕ್ಕೂ ಪ್ರತ್ಯೇಕ ಕಲ್ಲಬೆಟ್ಟು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ.)ಕಲ್ಲಬೆಟ್ಟು ಜಾರಿಗೊಳ್ಳಲಿದೆ. ಈ ಸಂಘಗಳಿಗೆ ಶೀಘ್ರದಲ್ಲೇ ಆಡಳಿತಧಿಕಾರಿ ನೇಮಕ ನಡೆಯಲಿದೆ ಎಂದು ಪ್ರತ್ಯೇಕ ಸಹಕಾರಿ ಸಂಘದ ಬೇಡಿಕೆ ಮಂಡಿಸಿ ಸುದೀರ್ಘ ಹೋರಾಟ ನಡೆಸಿದ್ದ ಸುಕೇಶ್ ಶೆಟ್ಟಿ ಎದಮೇರು ತಿಳಿಸಿದ್ದಾರೆ.

ಪ್ರತ್ಯೇಕ ಸಹಕಾರಿ ಸಂಘದ ಪ್ರಮಾಣ ಪತ್ರವನ್ನು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಸಂಘಗಳ ಉಪನಿಭಂದಕರಾದ ಹೆಚ್. ಎನ್. ರಮೇಶ್ ಅವರು ಸುಕೇಶ್ ಶೆಟ್ಟಿಯವರ ತಂಡಕ್ಕೆ ಇತ್ತೀಚೆಗೆ ಮಂಗಳೂರ್ ನಲ್ಲಿ ಹಸ್ತಾಂತರ ಮಾಡಿದ್ದಾರೆ.

ಊರ ಪ್ರಮುಖರಾದ ಎಸ್. ಪ್ರವೀಣ್ ಕುಮಾರ್, ಲತಾ ಹೆಗ್ಡೆ, ಜಯಾನಂದ್ ಶೆಟ್ಟಿ, ಶಶಿಕುಮಾರ್ ರೈ, ಸಂತೋಷ್ ಶೆಟ್ಟಿ, ಸಂತೋಷ ಅಂಚನ್ ದಿನೇಶ್ ಶೆಟ್ಟಿ ತಿಮಾರ್, ಕೃಷ್ಣ ಭಟ್, ಸತೀಶ್ ಕೆ. ಸಿ., ಲಕ್ಷ್ಮಣ್ ಕೋಟ್ಯಾನ್ ಈ ಸಂದರ್ಭದಲ್ಲಿದ್ದರು.

Related posts

ಪಡುಕೊಣಾಜೆ ಗ್ರಾಮದಲ್ಲಿ 45 ಎಕ್ರೆ ಜಾಗ ವಕ್ಫ್‌ಗೆ ಆರೋಪ- ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ಧಿಗೆ ಅರುಣ್ ಶೆಟ್ಟಿ ಆಕ್ರೋಶ

Madhyama Bimba

ರಾಜ್ಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ಮಲ್ಲಕಂಬ ಸ್ಪರ್ಧೆ: ಆಳ್ವಾಸ್ ಶಾಲೆಗೆ ತಂಡ ಪ್ರಶಸ್ತಿ

Madhyama Bimba

ಶಿರ್ತಾಡಿಯಲ್ಲಿ ಬಹುನಿರೀಕ್ಷಿತ ಬಸ್ಸು ತಂಗುದಾಣ ಮತ್ತು ವಾಣಿಜ್ಯ ಸಂಕೀರ್ಣ ಕಟ್ಟಡದ ಶಿಲಾನ್ಯಾಸ-ಸಂಜೀವಿನಿ ಕಟ್ಟಡದ ಉದ್ಘಾಟನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More