ಹೆಬ್ರಿ ಹಾಗೂ ಸುತ್ತಮುತ್ತಲಿನ ಜನರಿಗೆ ಜೀವನದಿಯಾಗಿ ಆಶ್ರಯವಾಗಿರುವ ಸೀತಾನದಿಗೆ ಕುಚ್ಚೂರು ಮಠದಬೆಟ್ಟು ಬಳಿ ಕಿಡಿಗೇಡಿಗಳು ಕೋಳಿ ತ್ಯಾಜ್ಯ ಎಸೆದಿರುವುದು ನೀರು ಸಂಪೂರ್ಣವಾಗಿ ಮಲಿನಗೊಂಡಿದೆ.
ಬೇಸಿಗೆಯ ಈ ಸಂದರ್ಭದಲ್ಲಿ ಹನಿ ಹನಿ ನೀರಿಗೂ ಕಷ್ಟ ಪಡುತ್ತಿರುವ ಪರಿಸ್ಥಿತಿಯಲ್ಲಿ ಸಾವಿರಾರು ಕುಟುಂಬಗಳು ಸೀತಾನದಿಯ ನೀರನ್ನು ಅವಲಂಬಿತರಾಗಿದ್ದು, ಇದೀಗ ಸಂಪೂರ್ಣ ಮಲಿನಗೊಂಡಿದೆ.
ಕಿಡಿಗೇಡಿಗಳನ್ನು ಆದಷ್ಟು ಬೇಗ ಪತ್ತೆ ಹಚ್ಚಬೇಕು. ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಎದುರಾಗಬಾರದೆಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.