ಹೆಬ್ರಿ: ಮೋಟಾರ್ ಸೈಕಲ್ಗೆ ನಾಯಿಗಳು ಅಡ್ಡ ಬಂದು ಮೋಟಾರ್ ಸೈಕಲ್ ಸಮೇತ ಸವಾರರು ರಸ್ತೆಗೆ ಬಿದ್ದು ಗಾಯಗೊಂಡ ಘಟನೆ ಜ. 21ರಂದು ವರದಿಯಾಗಿದೆ.

ವರಂಗ ಗ್ರಾಮದ ಸುದರ್ಶನ್ ಶೆಟ್ಟಿ (36) ಹಾಗೂ ದಿನೇಶ್ ಶೆಟ್ಟಿ ಗಾಯಗೊಂಡವರು.
ಸುದರ್ಶನ್ ಹಾಗೂ ದಿನೇಶ್ರವರು ಮುನಿಯಾಲಿನಿಂದ ಹೆಬ್ರಿ ಕಡೆಗೆ ಹೋಗುತ್ತಿರುವಾಗ ಮುದ್ರಾಡಿ ಕೆಳಕಿಲ ಮೆಸ್ಕಾಂ ಕಚೇರಿ ಎದುರು ನಾಯಿಗಳು ಒಮ್ಮೇಲೆ ಅಡ್ಡ ಬಂದ ಕಾರಣ ಸವಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ.
ಗಾಯಗೊಂಡವರು ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
