ಹೆಬ್ರಿ: ನಾಡ್ಪಾಲು ಗ್ರಾಮದ ಆಗುಂಬೆ ಘಾಟಿಯ 02 ತಿರುವಿನ ಬಳಿ ಮೋಟಾರ್ ಸೈಕಲ್ಗೆ ಟಿಪ್ಪರ್ ಲಾರಿ ಡಿಕ್ಕಿಯಾಗಿ ಮೋಟಾರ್ ಸೈಕಲ್ ಸವಾರ ಗಾಯಗೊಂಡ ಘಟನೆ ಮಾ. 01ರಂದು ವರದಿಯಾಗಿದೆ.
ಮೋಟಾರ್ ಸೈಕಲ್ ಸವಾರ ಶೃಜನ್ ತಮ್ಮೆಗೌಡ (24) ಗಾಯಗೊಂಡವರು.
ಶೃಜನ್ ತಮ್ಮೆಗೌಡ ಹಾಗೂ ಸಹಸವಾರೆ ಅಶ್ವೀನಿಯವರು ಮೋಟಾರ್ ಸೈಕಲ್ನಲ್ಲಿ ಹಾಸನಕ್ಕೆ ಹೋಗುತ್ತಿರುವಾಗ ಆಗುಂಬೆ ಕಡೆಯಿಂದ ಬರುತ್ತಿದ್ದ ಟಿಪ್ಪರ್ ಲಾರಿಯನ್ನು ಚಾಲಕ ರಮೇಶ್ ಅತೀವೇಗ ದಿಂದ ಚಾಲಾಯಿಸಿಕೊಂಡು ಬಂದು ಮೋಟಾರ್ ಸೈಕಲ್ಗೆ ಡಿಕ್ಕಿ ಹೊಡೆದಿದ್ದಾನೆ.
ಡಿಕ್ಕಿಯ ಪರಿಣಾಮ ಶೃಜನ್ರವರು ಗಾಯಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
