ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಮನಬೆಟ್ಟು ಮುಖ್ಯ ರಸ್ತೆಯ ನಡುಭಾಗದಲ್ಲಿ ಬಿಯರ್ ಬಾಟಲ್, ಅನುಪಯುಕ್ತ ವಸ್ತುಗಳನ್ನು ಒಳಗೊಂಡ ಕಸದ ರಾಶಿಯ ಕಟ್ಟೊಂದನ್ನು ರಸ್ತೆಯ ನಡುಭಾಗದಿಂದ ತೆರವುಗೊಳಿಸಿ ಪಂಚಾಯತ್ ನಿಕಟ ಪೂರ್ವ ಸದಸ್ಯ ರಮೇಶ್ ಶೆಟ್ಟಿಯವರು ಸಮಾಜಮುಖಿ ಕಾರ್ಯ ನಡೆಸಿದ್ದಾರೆ.
ಪಡುಮಾರ್ನಾಡು ಗ್ರಾಮದ ಬಸವನಕಜೆ ಎಂಬಲ್ಲಿಯ ವ್ಯಕ್ತಿ ಎನ್ನಲಾದ ಓರ್ವರು ಕಸದ ರಾಶಿಯನ್ನು ಒಳಗೊಂಡ ಕಟ್ಟನ್ನು ರಸ್ತೆಯ ನಡುಭಾ ಗದಲ್ಲಿ ಇರಿಸಿ ಮಾನವೀಯ ಕಾರ್ಯಕ್ಕೆ ಸವಾಲೊಡ್ಡಿರುವುದನ್ನು ಸಮಾಜಮುಖಿ ಕಾರ್ಯ ನಡೆಸುವ ಮೂಲಕ ರಮೇಶ್ ಶೆಟ್ಟಿಯವರು ವಿರೋಧಿಸಿದ್ದಾರೆ. ಅವರ ಈ ಕಾರ್ಯ ಪ್ರಶಂಸೆಗೊಳ್ಳಪಟ್ಟಿದೆ. ರಸ್ತೆಯ ನಡುಭಾಗದಲ್ಲಿ ಅನುಪಯುಕ್ತ ವಸ್ತುಗಳನ್ನು ಹಾಕಿರುವ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಪಂಚಾಯತ್ ಆಡಳಿತ ನಿರ್ಧರಿಸಿದೆ.
