ಕಾರ್ಕಳ

ಕಾರ್ಕಳ: ವ್ಯಕ್ತಿ ಮೃತ್ಯು

ಕಾರ್ಕಳ: ವ್ಯಕ್ತಿಯೋರ್ವರು ಅನಾರೋಗ್ಯದಿಂದ ಮೃತಪಟ್ಟ ಘಟನೆ ಮಾ. 04ರಂದು ವರದಿಯಾಗಿದೆ.

ಟಿ ಉನ್ನಿ (48) ಮೃತ್ಯುವಿಗೀಡಾದ ವ್ಯಕ್ತಿ.

ಟಿ. ಉನ್ನಿಯವರು ರಬ್ಬರ್ ತೋಟವನ್ನು ಲೀಸ್‌ಗೆ ವಹಿಸಿಕೊಂಡು ಕೆಲಸದವರಿಂದ ಟ್ಯಾಪಿಂಗ್ ಮಾಡಿಸುವ ಕೆಲಸ ಮಾಡುತ್ತಿದ್ದು ಸುಮಾರು 2 ವರ್ಷದಿಂದ ಕಾರ್ಕಳ ನಲ್ಲೂರು ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಮಾ. 4ರಂದು ಮಧ್ಯಾಹ್ನ ಮಲಗಿದವರು ಸಂಜೆಯಾದರೂ ಏಳದ ಕಾರಣ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ವೈದ್ಯರು ಪರೀಕ್ಷಿಸಿ ಟಿ ಉನ್ನಿರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.

ಇವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು 16 ವರ್ಷದ ಹಿಂದೆ ಸ್ಟಂಟ್ ಅಳವಡಿಸಿರುತ್ತಾರೆ. ಅವರು ಹೃದಯಾಘಾತದಿಂದ ಮೃತಪಟ್ಟಿರಬಹುದಾಗಿದೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಕಾಂಗ್ರೆಸ್‌ನ ಜನ ವಿರೋಧಿ ನೀತಿಯನ್ನು ಖಂಡಿಸಿ ಬಿಜೆಪಿ ಪ್ರತಿಭಟನಾ ಸಭೆ

Madhyama Bimba

ವಲಯ ಸಂಯೋಜಕರ ಹುದ್ದೆ: ಅರ್ಜಿ ಆಹ್ವಾನ

Madhyama Bimba

ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ, ಕಾರ್ಕಳ- ಸಾಮಾನ್ಯ ಅರಿವಳಿಕೆಯಡಿ ವೃದ್ದ ರೋಗಿಯ ಸಂಕೀರ್ಣ ಅಪಾಯಕರ ಕಣ್ಣಿನ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯ ಯಶಸ್ವಿ ನಿರ್ವಹಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More