ಕಾರ್ಕಳ: ಮೋಟಾರ್ ಸೈಕಲ್ಗೆ ಟಿಪ್ಪರ್ ಲಾರಿ ಡಿಕ್ಕಿಯಾಗಿ ಮೋಟಾರ್ ಸೈಕಲ್ ಸವಾರ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ಘಟನೆ ಮಾ. 19ರಂದು ವರದಿಯಾಗಿದೆ.

ಗಣೇಶ ನಾಯಕ್ ಮೃತಪಟ್ಟವರು.
ಗಣೇಶ್ ನಾಯಕ್ರವರು ಮೋಟಾರ್ ಸೈಕಲ್ನಲ್ಲಿ ಹಂಪನಕಟ್ಟೆ ಕಡೆಗೆ ಬರುತ್ತಿರುವಾಗ ಟಿಪ್ಪರ ಲಾರಿಯು ಮೋಟಾರ್ ಸೈಕಲ್ನ ಹಿಂಬದಿಯಿಂದ ಡಿಕ್ಕಿಯಾಗಿದೆ.
ಡಿಕ್ಕಿಯ ಪರಿಣಾಮ ಗಣೇಶ ನಾಯಕ್ ಮೋಟಾರ್ ಸೈಕಲ್ ಸಮೇತ ರಸ್ತೆಯಲ್ಲಿ ಬಿದ್ದು, ಲಾರಿಯು ಗಣೇಶ ನಾಯಕ್ರವರ ತಲೆಯ ಮೇಲೆ ಹರಿದು ಹೋಗಿ ಗಂಭೀರ ಸ್ವರೂಪದ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
