ಬಿ.ಎಸ್.ಎನ್.ಡಿ.ಪಿ. ರಾಜ್ಯ ಮಹಿಳಾ ಸಂಘಟನೆ ಹಾಗೂ ಉದ್ದೇಶಿತ ಕರ್ನಾಟಕ ರಾಜ್ಯ ಶಿವಶರಣೆ ಅಕ್ಕಮ್ಮ ಮಹಿಳಾ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ನೀಡಲಾಗುವ ಪ್ರತಿಷ್ಠಿತ “ಶಿವಶರಣೆ ಅಕ್ಕಮ್ಮ ರಾಜ್ಯ ಪ್ರಶಸ್ತಿ 2026” ಕ್ಕೆ
ಉಡುಪಿ ಜಿಲ್ಲಾ ಮಹಿಳಾ ಘಟಕದ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ಮಮತಾ ರಾಜು ಹಾಗೂ ಮಂಜುಳಾ ವಿಶ್ವನಾಥ್ ಆಯ್ಕೆಯಾಗಿ ಇಂದು ಪ್ರಶಸ್ತಿಯನ್ನು ಸ್ವೀಕರಿಸಿದರು.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ, ಈಡಿಗ, ಬಿಲ್ಲವ ಹಾಗೂ ನಾಮಧಾರಿ ಸೇರಿದಂತೆ 26 ಒಳಪಂಗಡಗಳ ಸಾಧಕರಿಗೆ ಮತ್ತು ಮಹಿಳಾ ಸಂಘಗಳ ಅಧ್ಯಕ್ಷರಿಗೆ ನೀಡಲಾಗುವ ಈ ಗೌರವವು ಸಮಾಜದ ಏಳಿಗೆಗಾಗಿ ನೀವು ತೋರಿದ ನಿಷ್ಠೆ, ಸಂಘಟನಾ ಚತುರತೆ ಮತ್ತು ಅಚಲವಾದ ನಾಯಕತ್ವಕ್ಕೆ ಸಂದ ಗೌರವವಾಗಿದೆ.
