ಹೆಬ್ರಿ: ನಾಡ್ಪಾಲು ಗ್ರಾಮದ ಸೋಮೇಶ್ವರ ಹೆಗ್ಡೆ ಹೋಟೇಲ್ ಬಳಿ ಶಿಪ್ಟ್ ಕಾರಿಗೆ ಬೊಲೆರೋ ವಾಹನ ಡಿಕ್ಕಿಯಾಗಿ ಕಾರಿನಲ್ಲಿದ್ದವರು ಗಾಯಗೊಂಡ ಘಟನೆ ಏ. 01ರಂದು ವರದಿಯಾಗಿದೆ.
ತೀರ್ಥಹಳ್ಳಿಯ ಕೆ ಎನ್ ಗಣೇಶರವರು ತನ್ನ ಶಿಪ್ಟ್ ಕಾರಿನಲ್ಲಿ ತಾಯಿ ವಿಶಾಲಾಕ್ಷಿ, ಅಕ್ಕ ಮಾನಸ, ಬಾವ ಮಹೇಶ್ರವರೊಂದಿಗೆ ಮಣಿಪಾಲ ಆಸ್ಪತ್ರೆಗೆ ಬರುತ್ತಿರುವಾಗ ಬೊಲೆರೋ ವಾಹನವನ್ನು ಚಾಲಕ ಠೋಣಿ ಥೋಮಸ್ರವರು ಕಾರನ್ನು ಓವರ್ ಟೇಕ್ ಮಾಡುವ ಭರದಲ್ಲಿ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ.
ಡಿಕ್ಕಿಯ ಪರಿಣಾಮವಾಗಿ ಎರಡೂ ವಾಹನಗಳು ಚರಂಡಿಗೆ ಬಿದ್ದು ಜಖಂಗೊಂಡಿದ್ದು, ವಿಶಾಲಾಕ್ಷಿ ಹಾಗೂ ಮಹೇಶ್ ರವರು ಗಾಯಗೊಂಡಿರುತ್ತಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
