ಕಾರ್ಕಳ ಬಂಗ್ಲೆಗುಡ್ಡೆ ನಿವಾಸಿ ಫೈಜಲ್ ಎಂಬಾತನನ್ನು ಕಾರ್ಕಳ ಪೊಲೀಸರು ಅಕ್ರಮ ಮಾದಕ ವಸ್ತು ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದಾರೆ.
ಹಲವಾರು ಪ್ರಕರಣಗಳಲ್ಲಿ ಪಾಲ್ಗೊಂಡಿದ್ದ ಈತನನ್ನು ಹೊರಜಿಲ್ಲೆಗೆ ಗಡಿಪಾರು ಮಾಡಿ ಆದೇಶಿಸಲಾಗಿತ್ತು. ಈ ಆದೇಶವನ್ನು ಜಾರಿ ಮಾಡಲು ಹೋದ ಪೊಲೀಸರ ಮೇಲೆ ಕಾರನ್ನು ಹಿಮ್ಮುಖವಾಗಿ ಚಲಾಯಿಸಿ ತೆಂಗಿನಮರಕ್ಕೆ ಡಿಕ್ಕಿ ಹೊಡೆದು ಓಡಿಹೋಗಿದ್ದ.
ಈ ಸಂದರ್ಭದಲ್ಲಿ ಕಾರನ್ನು ಪರಿಶೀಲಿಸಿದ ಪೊಲೀಸರಿಗೆ ಅದರಲ್ಲಿ ಮಾದಕ ವಸ್ತುವಾದ ಗಾಂಜಾ ಪತ್ತೆಯಾಗಿತ್ತು. ಈ ಆರೋಪಿ ಜೊತೆಗೆ ಇನ್ನೊಬ್ಬ ಆರೋಪಿ ಸೇರಿ ಇವರು ಮಾದಕ ವಸ್ತು ಮಾರಾಟ ಮಾಡಲು ಕಾಯುತ್ತಿದ್ದರು.
ಈ ಫೈಜಲ್ ಎಂಬಾತ ಕಾರ್ಕಳದಲ್ಲಿ ರೌಡಿಯಾಗಿ ಹತ್ಯೆಗೀಡಾಗಿದ್ದ ಸುಲೇಮಾನ್ ಎಂಬಾತನ ಪುತ್ರ ಎಂದು ತಿಳಿದುಬಂದಿದೆ.
