Blog

ಪಿಯು ಪರೀಕ್ಷೆ:   ಎಕ್ಸಲೆಂಟ್‌ನ  ವಿದ್ಯಾರ್ಥಿಗಳ ಉತ್ತಮ ಫಲಿತಾಂಶ

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೂಡುಬಿದಿರೆ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪಿಯು ಕಾಲೇಜು ಉತ್ತಮ ಸಾಧನೆ ತೋರಿದೆ.
ಕಾಲೇಜಿನ ಒಟ್ಟು 32 ವಿದ್ಯಾರ್ಥಿಗಳು ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ರಾಜ್ಯಮಟ್ಟದ ಮೊದಲ ಹತ್ತು ರ‍್ಯಾಂಕ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ತನ್ಮಯಿ ಎ.ಕೋಟಿ 597 ಅಂಕಗಳೊಂದಿಗೆ  ಸಾಧನೆ ಮಾಡಿದ್ದರೆ, ನಕ್ಷಾ ವಿಜೀತ್ ಪಟೇಲ್, ಗೋಕುಲ್ ಎಂ, ಪೂರ್ವಿ ಪಿ ಶೆಟ್ಟಿ ಮತ್ತು ವರುಣ್ ಆರ್ ತಲಾ 593 ಅಂಕಗಳನ್ನು ಗಳಿಸಿದ್ದಾರೆ. ಸಾತ್ವಿಕ್ ದತ್ತ ಬೋಯ, ಹಂಸಿಕಾ ಹೆಚ್ ಎಸ್, ಸಮರ್ಥ ಕೆ.ಎಸ್, ಶ್ಯಾಮ ಕಲ್ಯಾಣ್ ಬೆಣ್ಣೂರು ಹಾಗೂ ತರುಣಿಕಾ ಎಸ್ 592 ಅಂಕಗಳನ್ನು ಪಡೆದಿದ್ದಾರೆ. ಎಂ.ಆರ್ ಅಶ್ಮಿತಾ ರಾಮ್, ಸ್ವರೂಪ ಎಂ. ಸಜ್ಜನಶೆಟ್ಟಿ ಮತ್ತು ಕುಸುಮ ಎಸ್ 591 ಅಂಕಗಳನ್ನು ಪಡೆದಿದ್ದಾರೆ. ಭಾರ್ಗವ್ ಎಸ್ ಭಟ್, ಹಿಮವಂತ್ ಪಿ, ಗುರುಚರಣ್ ಎಂ ಶೆಟ್ಟಿ ಹಾಗೂ ಹಿಮೇಶ್ ಶಂಕರ್ 590 ಅಂಕಗಳ ಸಾಧನೆ ಮಾಡಿದ್ದಾರೆ. ಹೇಮಾ ಯು, ಸಂಜನಾ ಹಳ್ಳದಮನಿ, ರಿತಿಶಾ ಜೈರಾಮ್ ಕೊಚ್ರೇಕರ್, ನಿಖಿಲ್ ಎಸ್ ಎಸ್ ಮತ್ತು ಲಾಕ್ಷ ವೈ 589 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಮಟ್ಟದ ಸಾಧಕರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಕೆ. ಎಚ್. ಅದಿತಿ ಭೂಷಣ್ 597 ಅಂಕಗಳನ್ನು ಗಳಿಸಿದ್ದಾರೆ. ಶೇಕ್ ಮೊಹಮ್ಮದ್ ರಮೀಜ್ 595 ಅಂಕಗಳನ್ನು ಪಡೆದರೆ, ಸುವಿತ್ ಭಂಡಾರಿ ಮತ್ತು ಶ್ರಾವಣಿ ಎಂ. ತಲಾ 594 ಅಂಕಗಳ ಸಾಧನೆ ಮಾಡಿದ್ದಾರೆ. ಸುಹಾನ ಸಚಿನ್ 593 ಅಂಕಗಳನ್ನು ಪಡೆದಿದ್ದು, ಶಮಂತ್ ಕೆ. ಎಂ., ಹೃತಿಕ್ ಎಂ. ಎನ್., ಹರ್ಷಿತ್ ಕಲಾಲ್ ಹಾಗೂ ವಿಕ್ರಮ್ ತಲಾ 592 ಅಂಕಗಳನ್ನು ಗಳಿಸಿದ್ದಾರೆ. ಕಾರ್ತಿಕ್ ಸುರೇಶ್ ಅಗಡಿ 591 ಅಂಕಗಳನ್ನು ಪಡೆದುಕೊಂಡಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಕಾಲೇಜಿನ ಆಧುನಿಕ ಗುರುಕುಲ ಪದ್ಧತಿ, ನಿರಂತರ ಪರಿಶ್ರಮ ಮತ್ತು ವಿದ್ಯಾರ್ಥಿಗಳ ಛಲ ಈ ಯಶಸ್ಸಿಗೆ ಕಾರಣವಾಗಿದ್ದು, ಕೇವಲ ಅಂಕಗಳಿಗಾಗಿ ಮಾತ್ರವಲ್ಲದೆ ಜ್ಞಾನ ಮತ್ತು ಸ್ಪರ್ಧಾತ್ಮಕ ಯುಗಕ್ಕೆ ಪೂರಕವಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕಾರ್ಯದರ್ಶಿ ರಶ್ಮಿತಾ ಜೈನ್ ಹಾಗೂ ಉಪನ್ಯಾಸಕರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

Related posts

ಗೂಡ್ಸ್ ವಾಹನದಲ್ಲಿ ಕಾರ್ಮಿಕರ ಸಾಗಾಟ : ಪೊಲೀಸರ ಕಾರ್ಯಾಚರಣೆ – ದಂಡ

Madhyama Bimba

ಕರ್ನಾಟಕದಲ್ಲಿ ಕಾಂಗ್ರೆಸ್ ವಿಜಯ – ಉದಯ ಶೆಟ್ಟಿ ಸಂತಸ

Madhyama Bimba

ಪೊಲೀಸ್ ಇಲಾಖೆಗೆ ಕೃತಜ್ಞತೆ ಸಲ್ಲಿಸಿದ ಮುನಿಯಾಲು ಉದಯ ಶೆಟ್ಟಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More