ಕಾರ್ಕಳ

ರಾಘು ಮಾಸ್ಟ್ರು ನಾಟಕ ನೂರರ ಪ್ರದರ್ಶನದ ಸಂಭ್ರಮಾಚರಣೆ

ಕಾರ್ಕಳ: ಚೈತನ್ಯ ಕಲಾವಿದರು ಬೈಲೂರು ಇವರ ಈ ವರ್ಷದ ಸೂಪರ್ ಹಿಟ್ ನಾಟಕ ರಾಘು ಮಾಸ್ಟ್ರು ಇದರ ನೂರರ ಪ್ರದರ್ಶನದ ಸಂಭ್ರಮಾಚರಣೆಯನ್ನು ಉಡುಪಿ ಗರ್ಡೆ ಲಕ್ಷ್ಮಿನಗರ ದಲ್ಲಿ ನಡೆದ ನಾಟಕ ಪ್ರದರ್ಶನದ ಸಂಧರ್ಭದಲ್ಲಿ ಆಚರಿಸಲಾಯಿತು.


ಅತ್ಯಲ್ಪ ಅವಧಿಯಲ್ಲಿ ನಾಟಕವು ನೂರರ ಗಡಿ ದಾಟಿ ಪ್ರದರ್ಶನಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ಸಂಘಟಕರ ವತಿಯಿಂದ ತಂಡದ ಸಾರಥಿ, ನಾಟಕದ ಕಥೆ ಸಂಭಾಷಣೆ ಹಾಗೂ ನಿರ್ದೇಶನ ಮಾಡಿದ ಪ್ರಸನ್ನ ಶೆಟ್ಟಿ, ಬೈಲೂರು ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ನೂರನೇ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಸಂಘಟರನ್ನು ನಾಟಕ ತಂಡದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತಂಡದ ಸಾರಥಿ ಪ್ರಸನ್ನ ಶೆಟ್ಟಿ ಬೈಲೂರು ಹಾಗೂ ತಂಡದ ಕಲಾವಿದರು ಸಂಘಟಕರು ಉಪಸ್ಥಿತ ರಿದ್ದರು.

Related posts

ಉಡುಪಿ : ಗೀತಾಂಜಲಿ ಪುರುಷರ ವಸ್ತ್ರ ಮಳಿಗೆ ಉದ್ಘಾಟನೆ

Madhyama Bimba

ಅಂಚೆ ಇಲಾಖೆ ವತಿಯಿಂದ ಪತ್ರ ಲೇಖನ ಸ್ಪರ್ಧೆ

Madhyama Bimba

ನಾಳೆ (ಫೆ. 26ರಂದು) ಮಾನಸ ಕಂಫರ್ಟ್ಸ್ ಉದ್ಘಾಟನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More