ಕಾರ್ಕಳ: ಚೈತನ್ಯ ಕಲಾವಿದರು ಬೈಲೂರು ಇವರ ಈ ವರ್ಷದ ಸೂಪರ್ ಹಿಟ್ ನಾಟಕ ರಾಘು ಮಾಸ್ಟ್ರು ಇದರ ನೂರರ ಪ್ರದರ್ಶನದ ಸಂಭ್ರಮಾಚರಣೆಯನ್ನು ಉಡುಪಿ ಗರ್ಡೆ ಲಕ್ಷ್ಮಿನಗರ ದಲ್ಲಿ ನಡೆದ ನಾಟಕ ಪ್ರದರ್ಶನದ ಸಂಧರ್ಭದಲ್ಲಿ ಆಚರಿಸಲಾಯಿತು.


ಅತ್ಯಲ್ಪ ಅವಧಿಯಲ್ಲಿ ನಾಟಕವು ನೂರರ ಗಡಿ ದಾಟಿ ಪ್ರದರ್ಶನಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ಸಂಘಟಕರ ವತಿಯಿಂದ ತಂಡದ ಸಾರಥಿ, ನಾಟಕದ ಕಥೆ ಸಂಭಾಷಣೆ ಹಾಗೂ ನಿರ್ದೇಶನ ಮಾಡಿದ ಪ್ರಸನ್ನ ಶೆಟ್ಟಿ, ಬೈಲೂರು ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.



ನೂರನೇ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಸಂಘಟರನ್ನು ನಾಟಕ ತಂಡದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತಂಡದ ಸಾರಥಿ ಪ್ರಸನ್ನ ಶೆಟ್ಟಿ ಬೈಲೂರು ಹಾಗೂ ತಂಡದ ಕಲಾವಿದರು ಸಂಘಟಕರು ಉಪಸ್ಥಿತ ರಿದ್ದರು.






