ಮೂಡುಬಿದಿರೆ ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ ಶ್ರೀ ಕ್ಷೇತ್ರ ಪುತ್ತಿಗೆ ಹಗಲು ರಥೋತ್ಸವ ಸಂದರ್ಭದಲ್ಲಿ ಮಹಾಮ್ಮಾಯಿ ಮರಾಟಿ ಸಮಾಜ ಸೇವಾ ಸಂಘ (ರಿ)ಪುತ್ತಿಗೆ ನೇತೃತ್ವದಲ್ಲಿ ಸಾಂಸ್ಕ್ರತಿಕ ವೇದಿಕೆಯಲ್ಲಿ ಶ್ರೀಯಕ್ಷನಿಧಿ (ರಿ)ಮೂಡಬಿದರೆ ಶಿಕ್ಷಣ ಸಂಸ್ಥೆ ಮತ್ತು ಯುವ ಮೇಳದ ಗುರುಗಳಾದ ಶಿವಕುಮಾರ್ ಮೂಡಬಿದರೆ ಇವರಿಗೆ ಸನ್ಮಾನ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕುಲದೀಪ ಎಂ, ಪುತ್ತಿಗೆಗುತ್ತು ಕೊಲಕಾಡಿ ನಿಲೇಶ್ ಶೆಟ್ಟಿ, ಮಹಾಮ್ಮಾಯಿ ಮರಾಟಿ ಸಂಘದ ಮಾಜಿ ಅಧ್ಯಕ್ಷರಾದ ವಿಠಲ ನಾಯ್ಕ , ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಗುಣಶೀಲ , ಸಂಜೀವ ನಾಯ್ಕ ಶೇಡಿಗುರಿ ಉಪಸ್ಥಿತರಿದ್ದರು. ಸಂಜೀವ ನಾಯ್ಕ ಕಾರ್ಯಕ್ರಮ ನಿರೂಪಿದರು. ನಂತರ ಯಕ್ಷನಿಧಿ (ರಿ)ಮೂಡಬಿದರೆ ಮಕ್ಕಳಿಂದ ಛತ್ರಪತಿ ಶಿವಾಜಿ ಯಕ್ಷಗಾನ ನಡೆಯಿತು.
