ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘದ ಬೆಳ್ಳಿ ಹಬ್ಬ ಸಂಭ್ರಮಾಚರಣೆ ಪ್ರಯುಕ್ತ ‘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಯ್ಯಪ್ಪ ನಗರ ಕುಕ್ಕುಂದೂರು ಇಲ್ಲಿನ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ಗಳನ್ನು ವಿತರಿಸಲಾಯಿತು.

ಈ ಸಂದರ್ಭ ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ಸಂತೋಷ್ ರಾವ್’, ಎಸ್.ಡಿ ಎಂ ಸ್ಥಾಪಕ ಅಧ್ಯಕ್ಷರೂ ಹಾಗೂ ಶಾಲಾ ಹಿತೈಷಿ ಶ್ರೀ ರಘುನಾಥ್ ಶೆಟ್ಟಿ, ಎಸ್ ಡಿ ಎಂ ಅಧ್ಯಕ್ಷರಾದ ಶ್ರೀಮತಿ ಪ್ರತಿಮಾ, ಸಂಘದ ನಿರ್ದೇಶಕರಾದ ದಿನೇಶ್ ಕುಮಾರ್ ವೈ , ಶಾಲಾ ಮುಖ್ಯೋಪಾಧ್ಯಯರಾದ ಶ್ರೀಮತಿ ರೇವತಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಜಯಶ್ರೀ ಹಾಗೂ ಸಂಘದ ಸಿಬ್ಬಂದಿ ಶ್ರೀಮತಿ ನಿರೀಕ್ಷಾ ಇವರು ಉಪಸ್ಥಿತರಿದ್ದರು.
