ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ , ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ , ಸ್ಕೂಲ್ ಆಫ್ ಸಿವಿಲ್ ಅಂಡ್ ಕೆಮಿಕಲ್ ಎಂಜಿನಿಯರಿಂಗ್ ವಿಭಾಗದ ಡಾ. ಪೂರ್ಣಚಂದ್ರ ಪಂಡಿತ್ ಅವರ ಮಾರ್ಗದರ್ಶನದಲ್ಲಿ , ಹಂಸಶ್ರೀ ಯವರು “ಮೆಕ್ಯಾನಿಕಲ್ ಅಂಡ್ ಡುರಾಬಿಲಿಟಿ ಪರ್ಫಾರ್ಮೆನ್ಸ್ ಆಫ್ ಒನ್ ಪಾರ್ಟ್“ ಅಲ್ಕಲಿ ಆಕ್ಟಿವೇಟೆಡ್ ಕಾಂಕ್ರೀಟ್ ಇನ್ಕಾರ್ಪೊರೇಟಿಂಗ್ ಕಾಂಕ್ರೀಟ್ ವಾಶ್ ವಾಟರ್” ಎಂಬ ವಿಷಯದ ಕುರಿತು ಸಂಶೋಧನೆಗಾಗಿ ಹಂಸಶ್ರೀಯವರು ಪಿ.ಎಚ್.ಡಿ. ಪದವಿ ಪಡೆದಿರುತ್ತಾರೆ.

ಇವರು ಮೂಡಬಿದ್ರೆಯ ನಿವೃತ್ತ ಬ್ಯಾಂಕ್ ಉದ್ಯೋಗಿ ಶಾಂತಿರಾಜ್ ಕೆ. ಹಾಗೂ ನಿವೃತ್ತ ಶಿಕ್ಷಕಿ ಶ್ರೀಮತಿ ಶೋಭಾ ಕೆ. ಅವರ ಪುತ್ರಿ.
