ಹೆಬ್ರಿ: ಸೀತಾನದಿ ನೆಲ್ಲಿಕಟ್ಟೆ ತಿಂಗಳೆ ಗರಡಿ ಬಳಿ ಸ್ಕೂಟರ್ಗೆ ಕಾರು ಡಿಕ್ಕಿಯಾದ ಘಟನೆ ಜೂ.16ರಂದು ನಡೆದಿದೆ.
ಸೀತಾನದಿ ನಾಡ್ಪಾಲುನ ಹರ್ಷಿಣಿ (43) ಗಾಯಗೊಂಡವರು.
ಹರ್ಷಿಣಿಯವರು ಹೆಬ್ರಿಯಿಂದ ತನ್ನ ಸ್ಕೂಟರ್ನಲ್ಲಿ ಹೋಗುತ್ತಿರುವಾಗ ಕೂಡ್ಲು ಫಾಲ್ಸ್ ಕಡೆಯಿಂದ ಬರುತ್ತಿದ್ದ ಕಾರು ಡಿಕ್ಕಿಯಾಗಿದೆ. ಡಿಕ್ಕಿಯ ಪರಿಣಾಮ ಹರ್ಷಿಣಿ ಗಾಯಗೊಂಡಿದ್ದು, ಕಾರಿನ ಚಾಲಕ ಸ್ಥಳದಿಂದ ಪರಾರಿಯಾಗಿರುತ್ತಾನೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
