ಪಡುಮಾರ್ನಾಡು ಅಚ್ಚರಕಟ್ಟೆ ಶ್ರೀ ಸುಮುಖ ಕುಣಿತ ಭಜನಾ ಮಂಡಳಿಯ ಉದ್ಘಾಟನಾ ಸಮಾರಂಭ ಜು.೫ ರಂದು ನಡೆಯಿತು.
ಭಜನಾ ಮಂಡಳಿಯ ಗೌರವಾಧ್ಯಕ್ಷರಾದ ದಯಾನಂದ ಪೈ ಮುಖ್ಯ ಅತಿಥಿಯಾಗಿದ್ದರು.
ಉದ್ಯಮಿ ಸೂರಜ್ ಜೈನ್ ಮಾರ್ನಾಡ್, ದಯಾನಂದ ಭಟ್, ಅಭಿನಂದನ್ ಬಲ್ಲಾಳ್, ಶ್ರೀ ಗುರುರಾಘವೇಂದ್ರ ಕುಣಿತ ಭಜನಾ ಮಂಡಳಿಯ ಸಂಚಾಲಕರು ಸತೀಶ್ ಪೂಜಾರಿ, ಭಜನಾ ಮಂಡಳಿಯ ಅಧ್ಯಕ್ಷರು ಉಮಾವತಿ ಬಿ ಬಂಗೇರ,ಉಪಾಧ್ಯಕ್ಷರು ಸುಂದರ ಪೂಜಾರಿ, ಕಾರ್ಯದರ್ಶಿ ಕೃಷ್ಣಪ್ಪ ಪೆರ್ನಾಡ್ಕ, ಜೊತೆ ಕಾರ್ಯದರ್ಶಿ ಗೀತಾ, ಖಜಾಂಚಿ ಮನು, ಕೋಶಾಧಿಕಾರಿ ಸ್ಮಿತಾ, ಗೌರವ ಸಲಹೆಗಾರರು ಪ್ರಮೋದ್ ಪೆರ್ನಾಡ್ಕ, ಭಜನಾ ತರಬೇತುದಾರರು ಲಕ್ಷಣ್ ನಾಯ್ಕ್ ಮತ್ತು ಪ್ರವೀಣ್ ಸಾಲ್ಯಾನ್ ಉಪಸ್ಥಿತರಿದ್ದರು.
ಮಕ್ಕಳ ಭಜನಾ ಮಂಡಳಿಯ ನಾಯಕ ರಶ್ಮಿತ್ ಆಚಾರ್ಯ, ನಾಯಕಿ ಸಾನಿಕ ಇವರನ್ನು ಆಯ್ಕೆ ಮಾಡಲಾಗಿದೆ.
ರವಿ ಮೂಲ್ಯ ನಿರೂಪಣೆಗೈದರು.
