ಯಕ್ಷತೀರ್ಥ ಸಂಭ್ರಮ 2026 ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಸಭಾಂಗಣದಲ್ಲಿ ನಡೆಯಿತು.
ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಆಧ್ಯಾತ್ಮಿಕ ಚಿಂತಕರಾದ ವಿವೇಕ ಚೈತನ್ಯಾನಂದ ಸ್ವಾಮೀಜಿಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಪೊಳಲಿ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಅಮ್ಮುಂಜೆಗುತ್ತು ಡಾ. ಎ. ಮಂಜಯ್ಯ ಶೆಟ್ಟಿ, ಯಕ್ಷಕಲಾ ಪೊಳಲಿ ಸಂಚಾಲಕರಾದ ವೆಂಕಟೇಶ್ ನಾವಡ, ಡಾ. ಪ್ರಸಾದ್ ಬಿ. ಶೆಟ್ಟಿ ಹೊಸ್ಮಾರು, ಡಾ. ಮಯೂರಿ ಪ್ರಖ್ಯಾತ್ ಶೆಟ್ಟಿ ಅಳಕೆ, ಡಾ. ಪ್ರಖ್ಯಾತ್ ಶೆಟ್ಟಿ ಅಳಕೆ, ಪ್ರಸಾದ್ ಸಿ. ಆಚಾರ್ಯ ಬಜಗೋಳಿ, ರುದ್ರಯ್ಯ ಆಚಾರ್ಯ ಚಿಕ್ಕಮಗಳೂರು, ಚಿಕ್ಕಮಗಳೂರು ದೈವಜ್ಞ ಸಮಾಜದ ಅಧ್ಯಕ್ಷರಾದ ಚಂದ್ರಶೇಖರ್, ಬಿ. ಜನಾರ್ಧನ ಅಮ್ಮುಂಜೆ, ಅಡೂರು ಸುರೇಶ್ ಆಚಾರ್ಯ, ವಾಮನ ಆಚಾರ್ಯ ನೂರಾಳ್ಬೆಟ್ಟು, ಯೋಗೀಂದ್ರ ಆಚಾರ್ಯ ಮೂಡುಬಿದಿರೆ, ಗಣೇಶ್ ಆಚಾರ್ಯ ಹೊಸ್ಮಾರು, ಸತೀಶ್ ಆಚಾರ್ಯ ನಾರಾವಿ, ವಸಂತ ನಾರಾವಿ, ಪ್ರಶಾಂತ್ ಆಚಾರ್ಯ ಮೂಡುಬಿದಿರೆ, ಯಕ್ಷತೀರ್ಥ ಕಲಾಸೇವೆ ನೂರಾಳ್ಬೆಟ್ಟು ಇದರ ಪ್ರಧಾನ ರೂವಾರಿಯಾಗಿರುವ ಸದಾನಂದ ಎಸ್. ಆಚಾರ್ಯ ಉಪಸ್ಥಿತರಿದ್ದರು.
ಜಿ.ಎ ಪುರಂದರ ಪುರೋಹಿತ್ ಕಾರ್ಯಕ್ರಮ ನಿರೂಪಿಸಿದರು. ವಸಂತ್ ಧನಲಕ್ಷ್ಮೀ ವಂದಿಸಿದರು.
