ಮೂಡಬಿದಿರೆ ಮಾರೂರು ಎಂಬಲ್ಲಿ ಶ್ರೀ ಶಕ್ತಿ ಸಿಂಚನ ಸ್ವ ಸಹಾಯ ಸಂಘವನ್ನು ಸ್ಥಳೀಯರಾದ ಸುರೇಶ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಮೇಲ್ವಿಚಾರಕರಾದ ಉಮೇಶ್ ರವರು ಸಂಘ ನಿರ್ವಣೆಯ ಬಗ್ಗೆ ಮಾಹಿತಿ ನೀಡಿದರು. ಶಾಖಾ ವ್ಯವಸ್ಥಾಪಕರಾದ ಕುಮುದಾಕ್ಷ ಕೋಟ್ಯಾನ್ ರವರು ಸಂಘದ ದಾಖಲಾತಿ ನೀಡಿ, ಸಂಸ್ಥೆಯ ಸೇವಾ ಚಟುವಟಿಕೆ ಮತ್ತು ಸಂಘದ ದಾಖಲಾತಿ ನಿರ್ವಹಣೆ ಬಗ್ಗೆ ತಿಳಿಸಿ ಶುಭ ಹಾರೈಸಿದರು.
ವಾರದ ಪ್ರತಿ ಆದಿತ್ಯವಾರ ಸಂಜೆ ಗಂಟೆ 5.30 ಕ್ಕೆ ಮಾರೂರು ಗ್ರೀನ್ ವಿಲ್ಲೇಜ್ ಎಂಬಲ್ಲಿ ಸಭೆ ನಡೆಸಿ ಪ್ರತಿಯೊಬ್ಬರು ರೂ 50/- ರಂತೆ ಉಳಿತಾಯ ಮಾಡುವುದೆಂದು ನಿರ್ಣಯಿಸಲಾಯಿತು. ಸಂಘದ ಅಧ್ಯಕ್ಷರಾಗಿ ಶ್ರೀಮತಿ ವನಿತಾ ಹಾಗೂ ಕಾರ್ಯದರ್ಶಿಯಾಗಿ ಕು. ಪ್ರತಿಮಾ ಆಯ್ಕೆಯಾದರು.
