ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಭಾ (ರಿ.) ಕಾರ್ಕಳ ಇದರ2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ನಡೆಯಿತು.
ಅಧ್ಯಕ್ಷರು ಬಿ. ಪ್ರಕಾಶ್ ಆಚಾರ್ಯ ಪುನರಾಯ್ಕೆಯಾದರು. ಕಾರ್ಯದರ್ಶಿಯಾಗಿ ಶಿಲ್ಪಿ ಭಾಸ್ಕರ್ ಬಿ. ಎಸ್. ಆಚಾರ್ಯ, ಉಪಾಧ್ಯಕ್ಷರಾಗಿ ಅಶೋಕ್ ಆಚಾರ್ಯ ಅಂಡಾರು, ಕೋಶಾಧ್ಯಕ್ಷರಾಗಿ ಪಿ. ವಸಂತ್ ಆಚಾರ್ಯ, ಜೊತೆ ಕಾರ್ಯದರ್ಶಿಯಾಗಿ ರಮೇಶ್ ಆಚಾರ್ಯ ಕಾರ್ಕಳ, ಕ್ರೀಡಾ ಕಾರ್ಯದರ್ಶಿಯಾಗಿ ಅರುಣ್ ಆಚಾರ್ಯ ಸಾಲ್ಮರ, ಉಪ ಕೋಶಾಧ್ಯಕ್ಷರಾಗಿ ಜೈರಾಂ ಆಚಾರ್ಯ, ಕಾರ್ಕಳ, ಸದಸ್ಯರುಗಳಾಗಿ ಶಿಲ್ಪಿ ರಾಮಚಂದ್ರ ಆಚಾರ್ಯ, ಸುರೇಶ್ ಆಚಾರ್ಯ ನಿಟ್ಟೆ, ಸುಧಾಕರ ಆಚಾರ್ಯ ಬಂಗ್ಲೆಗುಡ್ಡೆ, ಸುರೇಶ್ ಆಚಾರ್ಯ ಸಾಲ್ಮರ, ಎಂ. ರಮೇಶ್ ಆಚಾರ್ಯ, ಎಂ. ಎಸ್. ಮೌನೇಶ್ ಆಚಾರ್ಯ, ಕೆ. ವಿಶ್ವನಾಥ ಆಚಾರ್ಯ, ಕೆ. ದಿನೇಶ್ ಆಚಾರ್ಯ ಆಯ್ಕೆಯಾದರು.
