ಕಾರ್ಕಳ: ದೂಪದಕಟ್ಟೆ ಜಂಕ್ಷನ್ ಬಳಿ ಕಾರುಗಳ ನಡುವೆ ಅಪಘಾತವಾದ ಘಟನೆ ಫೆ. 06ರಂದು ವರದಿಯಾಗಿದೆ.

ದಯಾನಂದ ಗಾಯಗೊಂಡವರು.
ಬೆಳ್ತಂಗಡಿ ಚಾರ್ಮಾಡಿ ಗ್ರಾಮದ ದಿನೇಶ್ ಗೌಡ (59),ತನ್ನ ಮಾರುತಿ ಆಲ್ಟೋ ಕಾರಿನಲ್ಲಿ ಹೆಂಡತಿ ಲೀಲಾವತಿ, ಮಗಳು ವಿನುಶ್ರೀ, ಸಂಬಂಧಿ ದಯಾನಂದ ಮತ್ತು ಚಾಲಕ ಅಖಿಲೇಶ್ರವರೊಂದಿಗೆ ನಿಟ್ಟೆಯಿಂದ ಬೆಳ್ತಂಗಡಿಗೆ ಹೋಗುತ್ತಿರುವ ಸಂದರ್ಭ ಅತ್ತೂರು ಚರ್ಚ್ ಕಡೆಯಿಂದ ದೂಪದಕಟ್ಟೆ ಜಂಕ್ಷನ್ ಕಡೆಗೆ ಕಾರುನ್ನು ಅದರ ಚಾಲಕ ವಿಶ್ವಾಸ್ ಅತೀವೇಗದಿಂದ ವಿರುದ್ಧ ದಿಕ್ಕಿನಲ್ಲಿ ಚಲಾಯಿಸಿಕೊಂಡು ಬಂದು ಮಾರುತಿ ಅಲ್ಟೋಗೆ ಡಿಕ್ಕಿ ಹೊಡೆದಿದ್ದಾನೆ.
ಡಿಕ್ಕಿಯ ಪರಿಣಾಮ ಮಾರುತಿ ಅಲ್ಟೋ ಕಾರಿನಲ್ಲಿದ್ದ ದಯಾನಂದ ಗಾಯವಾಗಿರುತ್ತದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
