ಶಿರ್ತಾಡಿ: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ (ರಿ )ಶಿರ್ತಾಡಿ ಮತ್ತು ಮಹಿಳಾ ಘಟಕ ಇದರ ವಿಶೇಷ ಸಭೆಯು ಆಗಸ್ಟ್ 30ರಂದು ಸಂಘದ ಅಧ್ಯಕ್ಷರಾದ ಸೋಮನಾಥ ಶಾಂತಿಯವರ ಅಧ್ಯಕ್ಷತೆಯಲ್ಲಿ ಸಭಾಗೃಹ ದಲ್ಲಿ ಜರಗಿತು.
ಶ್ರೀ ನಾರಾಯಣ ಗುರುಗಳ ಸಂದೇಶದಂತೆ ವಿದ್ಯೆಗೆ ಮಹತ್ವ ನೀಡುವ ಉದ್ದೇಶದಿಂದ ದತ್ತಿ ನಿಧಿ ಸಂಚಾಲಕರನ್ನಾಗಿ ವಸಂತ ಪೂಜಾರಿ ಪಂಚಮಿ ಅವರನ್ನು ಹಾಗೂ ಯುವ ಪ್ರತಿಭೆಗಳ ಸಂಘಟನೆಗಾಗಿ ಕ್ರೀಡಾ ಉಸ್ತುವಾರಿ ಸಮಿತಿಯ ಅಧ್ಯಕ್ಷರನ್ನಾಗಿ ನಾಭಿರಾಜ್ ಸುವರ್ಣ ಉಡ್ರೆಜಾಲು ಇವರನ್ನು ಆಯ್ಕೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಅಶೋಕ್ ಕುಮಾರ್ ಮಾಂಟ್ರಾಡಿ, ಕುಶಾಲ್ ಕುಮಾರ್ ಹೌದಲ್, ಸುರೇಂದ್ರ ಜೆಎನ್ಎಸ್ ಕಂದೀರು, ವಿಶ್ವನಾಥ ಕೋಟ್ಯಾನ್ ಹನ್ನೇರ್, ವಿಠಲ ಪೂಜಾರಿ ಹಾಲಾಜೆ, ರಮೇಶ್ ಪೂಜಾರಿ ಕಲ್ಲಡ್ಕ, ಅಪ್ಪು ಪೂಜಾರಿ ಕುಜುಂಬಡೆ, ಸುರೇಂದ್ರ ಸಾಲಿಯಾನ್ ಪೆದಮಲೆ, ರಮೇಶ್ ಸಾಲಿಯಾನ್ ಪಿಲಿಬೆಟ್ಟು, ರಾಘವ ಪಿ ಸುವರ್ಣ ಕೊಪ್ಪದೊಟ್ಟು, ಮೋನಪ್ಪ ಪೂಜಾರಿ, ಬೋಧಲ ಹರಿಶ್ಚಂದ್ರ ಕೆ ಸಿ ಪಡುಕೋಣಾಜೆ , ಕೃಷ್ಣಪ್ಪ ಕೋಟ್ಯಾನ್ ಪ್ರಶಾಂತ್ ನಿವಾಸ, ಲಿಂಗಪ್ಪ ಪೂಜಾರಿ, ಲೋಕೇಶ್ ಪೂಜಾರಿ ಅಳಿಯೂರು, ಶ್ರೀಮತಿ ಸುಗಂಧಿ ಕೃಷ್ಣ ಬಂಗೇರ ಮಕ್ಕಿ, ಶ್ರೀಮತಿ ವಿನೋದ ಸುಧಾಕರ್ ಪೂಜಾರಿ ಮೂಡು ಕೋಣಾಜೆ, ಶ್ರೀಮತಿ ಪ್ರಮೀಳಾ ಹರೀಶ್ ಬಾಕುಂದೋಡಿ, ಶ್ರೀಮತಿ ದೀಪಿಕಾ ಪ್ರವೀಣ್ ಮಾತೃಶ್ರೀ ಅಳಿಯೂರು, ಶ್ರೀಮತಿ ಅಶ್ವಿನಿ ಸಂತೋಷ್ ಕೋಟ್ಯಾನ್ ಅಳಿಯೂರು, ಶ್ರೀಮತಿ ಸುಗಂಧಿ ವಸಂತ ಪೂಜಾರಿ ಶೆಟ್ಟಿಬೇಟು, ಶ್ರೀಮತಿ ಪ್ರಮೀಳಾ ಸುಂದರ ಪೂಜಾರಿ, ಕುಮಾರಿ ಸುಚಿಕ್ಷ ಸಾಯಿ ವಾಲ್ಪಾಡಿ ಉಪಸ್ಥಿತರಿದ್ದರು.
