ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯುತ್ತಮ ಸಾಧನೆಗಾಗಿ ಗೌರವ ಡಾಕ್ಟರೇಟ್ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ರಾಜ್ಯ ಪ್ರಶಸ್ತಿ ಪಡೆದ ಪುತ್ತಿಗೆ ಗ್ರಾಮದ ಡಾ. ಸುಧಾಕರ ತಂತ್ರಿ ಸಂಪಿಗೆ ಇವರಿಗೆ ಶ್ರೀ ಸೋಮನಾಥೇಶ್ವರ ಭಜನ ಮಂಡಳಿ ನೆಲ್ಲಿಗುಡ್ಡೆ ಪುತ್ತಿಗೆ ಇದರ ವತಿಯಿಂದ ನವರಾತ್ರಿಯ ಮೊದಲ ದಿನ ಅವರ ಸ್ವಗೃಹದಲ್ಲಿ ಅಭಿನಂದಿಸಿ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಪ್ರಕಾಶ್ ಅಮೀನ್, ಕರುಣಾಕರ ನಾಯ್ಕ, ಶ್ರೀನಿವಾಸ ನಾಯ್ಕ, ಸುದರ್ಶನ, ಸಂಜೀವ ನಾಯ್ಕ, ಲಕ್ಷ್ಮಣ ನಾಯ್ಕ, ಲೋಕೇಶ್ ಕುಲಾಲ್ ಮತ್ತು ಕುಟುಂಬದವರು ಹಿತೈಷಿಗಳು ಉಪಸ್ಥಿತರಿದ್ದರು.

