ವರದಿ ಇಮ್ತಿಯಾಜ್ ಕಾರ್ಕಳ
ಕಲಂಬಾಡಿ ಪದವು ನಿವಾಸಿ ನಿವೃತ್ತ ಶಿಕ್ಷಕಿ ಕೆ ಸುಮತಿ ಬಾಯಿ ಎಂಬವರ ಮನೆಗೆ ಮಂಗಳವಾರದಂದು ರಾತ್ರಿ ಎಂಟು ಗಂಟೆಯ ಸಮಯ ಸಿಡಿಲು ಬಡಿದು ಹಾನಿಯುಂಟಾಗಿದೆ.

ಮನೆಯ ವಿದ್ಯುತ್ ಮೀಟರ್ ಹಾಗೂ ಉಪಕರಣಗಳೆಲ್ಲ ಸುಟ್ಟು ಹೋಗಿದ್ದು , ಮಾಡಿನ ಹಂಚುಗಳು, ಆರು ತೆಂಗಿನ ಗಿಡಗಳಿಗೆ ಹಾನಿಯಾಗಿದೆ.

ಸಿಡಿಲು ಬಡಿದ ಸಂದರ್ಭ ವೃದ್ಧ ಮಹಿಳೆ ಒಬ್ಬರೇ ಇದ್ದು ಸಿಡಿಲಿನ ಆಘಾತಕ್ಕೆ ಒಳಗಾಗಿ ಪ್ರಜ್ಞೆ ತಪ್ಪಿ ನೆಲದಲ್ಲೇ ಬಿದ್ದಿದ್ದು ಮರುದಿವಸ ಮುಂಜಾನೆ ನಾಲ್ಕು ಗಂಟೆಯ ಸಮಯಕ್ಕೆ ಎಚ್ಚರ ಗೊಂಡು ನಂತರ ಸಂಬಂಧಿಕರಿಗೆ ಕರೆ ಮಾಡಿದ್ದಾರೆ. ಕಳೆದೆರಡು ದಿನಗಳಿಂದ ವಿದ್ಯುತ್ ಸಂಪರ್ಕ ಇಲ್ಲದೆ ಕತ್ತಲೆಯಲ್ಲೇ ವಾಸಿಸುತ್ತಿದ್ದಾರೆ.


