ಕಾರ್ಕಳ

ಕಾರ್ಕಳದಲ್ಲಿ ಅಂದರ್ – ಬಾಹರ್ ಇಸ್ಪೀಟ್ ಜೂಜಾಟ: ಬಂಧನ

ಕಾರ್ಕಳ: ಅ. 13ರಂದು ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಎದುರುಗಡೆ ಹೊಸದಾಗಿ ನಿರ್ಮಾಣ ಆಗುತ್ತಿರುವ ಕಟ್ಟಡದ ಹಿಂಬದಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿರಿಸಿ ಅಂದರ್ – ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ ಖಚಿತ ಮಾಹಿತಿಯಂತೆ ಕಾರ್ಕಳ ನಗರ ಪೊಲೀಸ್ ಠಾಣಾ ಪಿಎಸ್‌ಐ ಸಂದೀಪ ಕುಮಾರ್ ಶೆಟ್ಟಿದಾಳಿ ನಡೆಸಿ 11 ಮಂದಿಯನ್ನು ಬಂಧಿಸಿದ್ದಾರೆ.


ಮೂಡಾರು ಗ್ರಾಮದ ಶ್ರೀನಿವಾಸ (50), ಕುಮಟಾ ತಾಲೂಕು ಚಂದಾವರ ಗ್ರಾಮದ ಮಂಜುನಾಥ (30), ಕಾರ್ಕಳ ಕಸಬಾ ಗ್ರಾಮದ ಮುತ್ತಣ್ಣ (21), ಮಂಜುನಾಥ (31), ನಾಗರಾಜ ಉಪ್ಪಾರ (47), ಲಕ್ಷಣ್, ಹೇಮ (60 ), ಮಿಯ್ಯಾರು ಗ್ರಾಮದ ಹೇಮನ್, ಬೈಪಾಸ ಬಳಿಯ ಚಿರಂಜೀವಿ, ಕಾರ್ಕಳ ಕಸಬಾ ಗ್ರಾಮದ ಯಮನೂರಪ್ಪ (20), ಆನೆಕೆರೆ ಬೈಪಾಸ ಬಳಿಯ ಮಲ್ಲಯ್ಯ (20) ಬಂಧಿತ ಆರೋಪಿಗಳು.


ಇಸ್ಟೀಟ್ ಜುಗಾರಿ ಅಟಕ್ಕೆ ಬಳಸಿದ ನಗದು ಹಣ 4950/- ರೂ. ಮತ್ತು52 ಇಸ್ಟೀಟ್ ಎಲೆಗಳು ಹಾಗೂ ನೆಲದ ಮೇಲೆ ಹಾಸಿದ ಹಳೆಯ ದಿನ ಪತ್ರಿಕೆಗಳನ್ನು ಸ್ವಾದೀನಪಡಿಸಿಕೊಂಡಿದ್ದಾರೆ.


ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಕಡ್ತಲ: ಆರಿ ಕೌಶಲ್ಯ ತರಬೇತಿ ಕಾರ್ಯಕ್ರಮ

Madhyama Bimba

ಕಾರ್ಕಳ ಬ್ಲಾಕ್ ಕಾಂಗ್ರೇಸ್ ಕಚೇರಿಯಲ್ಲಿ ಗಾಂಧಿ, ಶಾಸ್ತ್ರಿ ಜನ್ಮದಿನಾಚರಣೆ

Madhyama Bimba

ನಮ್ಮ ಬದುಕಿನಲ್ಲಿ ಗುರಿ ತಲುಪಬೇಕಾದರೆ ಶಿಸ್ತು ಅತೀ ಅಗತ್ಯ : ಡಾ.ರವಿಪ್ರಸಾದ್ ಹೆಗ್ಡೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More