ಕಥೊಲಿಕ್ ಸಭಾ ಕಾಕ೯ಳ ವಲಯ ಕಾಯ೯ಕತ೯ರು ಉಡುಪಿ, ಚಿಕ್ಕಮಗಳೂರು ಲೋಕಸಭಾ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿಯಾಗಿ ನಂದಿಕೂರು, ಕಾಕ೯ಳ, ಉಜಿರೆ, ಬೆಳ್ತಂಗಡಿ, ಚಾಮಾ೯ಡಿ ಮುಖಾಂತರ ಹಳೆ ಮೂಡಿಗೆರೆಗೆ ಸಂಪಕಿ೯ಸುವ ರೈಲ್ವೆ ಯೋಜನೆ ಜಾರಿಗೊಳಿಸಲು ಡಿ.07ರಂದು ಮಣಿಪಾಲ ರಜತಾದ್ರಿಯಲ್ಲಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಲಯ ಮಾಜಿ ಅಧ್ಯಕ್ಷರು ಹಾಗೂ ರೈಲ್ವೆ ಸಂಚಾಲಕರಾದ ಮೆಕ್ಸಿಮ್ ಡಿ’ಮೆಲ್ಲೊ, ಕೆಂದ್ರೀಯ ಉಪಾಧ್ಯಕ್ಷ ಸೊಲೊಮನ್ ಆಲ್ವಾರಿಸ್, ಘಟಕ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಡಿ’ಮೆಲ್ಲೊ, ಸಮಾಜ ಸೇವಕರಾದ ಹೆನ್ರಿ ಸಾಂತ್ ಮಯೋರ್ ಉಪಸ್ಥಿತರಿದ್ದರು.